ಭೂಮಿಕೆ

Author : ರಘುಶಂಖ ಭಾತಂಬ್ರಾ

Pages 120

₹ 70.00




Year of Publication: 2012
Published by: ಬಸವ ಪ್ರಕಾಶನ
Address: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು, ಗುಲ್ಬರ್ಗಾ.

Synopsys

ತತ್ತ್ವಪದ ಸಾಹಿತ್ಯವೇ ಈ ಕೃತಿಯ ಕೇಂದ್ರಧಾರೆ. ತತ್ತ್ವಪದ ಸಾಹಿತ್ಯದ ಆಯಾಮಗಳು, ಜನಪದರು ಮತ್ತು ವಚನಕಾರರು, ಗರತಿ ಮಾತು ಕಲ್ಲು ಸಕ್ಕರಿ ಹಾಂಗ, ಕನಕದಾಸರ ಕೀರ್ತನೆಗಳ ಅವಲೋಕನ, ತತ್ತ್ವಪದಕಾರ ಖೈನೂರ ಕೃಷ್ಣಪ್ಪ, ಸಮನ್ವಯ ಸಿಂಧು-ಧುಮ್ಮನಸೂರು ಸಿದ್ಧಪ್ರಭು, ಹೆಡಗಾಪುರ ಸಿದ್ಧರಾಮ ಮುಕರಂಬಿಯವರ ತತ್ತ್ವಪದ ಸಾಹಿತ್ಯ, ದೇಶಾಂಶ ಹುಡಗಿಯವರ ಸಾಹಿತ್ಯ ಮತ್ತು ಭಾವೈಕ್ಯತೆಯ ಬೆಳದಿಂಗಳು ಮುಂತಾದ ಲೇಖನಗಳನ್ನು ಕೃತಿ ಒಳಗೊಂಡಿದೆ.  

ಡಾ. ಗವಿಸಿದ್ಧಪ್ಪ ಎಚ್. ಪಾಟೀಲ ಅವರು ಮುನ್ನುಡಿಯಲ್ಲಿ “ಅನುಭವದ ನೆಲೆಯು ಅನುಭಾವದ ಕಡೆ ವಾಲಿ ನಿಂತು ಮನುಷ್ಯನ ಪ್ರಜ್ಞೆ ಹಾಗೂ ಮಾನವೀಯತೆ ಎತ್ತಿ ಹಿಡಿಯುವ ಕೆಲಸ ತತ್ವಪದಕಾರರು-ಜನಪದರು-ಶರಣರು-ದಾಸರು ಮಾಡಿದ್ದಾರೆಂಬ ಅಂಶವನ್ನು ಲೇಖಕರು ಪ್ರಾಮಾಣಿಕವಾಗಿ ಚಿತ್ರಿಸಿದ್ದಾರೆ. ಇವು ಮನುಕುಲದ ಜೀವನಕ್ಕೆ ಭದ್ರ ಬುನಾದಿಯಾಗಬಲ್ಲ ಅಂಶಗಳು. ಲೇಖಕರ ಅಧ್ಯಯನಶೀಲತೆ, ವಿಶಾಲವಾದ ದೃಷ್ಟಿ, ಸಾಹಿತ್ಯವನ್ನು ಬಹುಮುಖಿ ಸಾಂಸ್ಕೃತಿಕ ನೆಲೆಗಳ ಕಾಳಜಿಯಿಂದ ನೋಡಿದ್ದರಿಂದಲೇ ಈ `ಭೂಮಿಕೆ' ಹೆಚ್ಚು ಪ್ರಸ್ತುತವೆನಿಸುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ರಘುಶಂಖ ಭಾತಂಬ್ರಾ
(01 January 1970)

“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ  ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್;  ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...

READ MORE

Related Books