ಭ್ರಾಂತಿ ವಿಲಾಸ

Author : ಬಿ. ವೆಂಕಟಾಚಾರ್ಯ

Pages 107




Year of Publication: 1911
Published by: ಶ್ರೀ ನರಸಿಂಹರಾಜ ಒಡೆಯರ ಬಹದ್ದೂರು ರವರ ಗ್ರಂಥಾವಳಿ
Address: ಮೈಸೂರು

Synopsys

ಭ್ರಾಂತಿ ವಿಲಾಸ-ಕಿರು ಕಾದಂಬರಿಯಂತಿರುವ ಕೃತಿಯು ಮೊದಲು 1877 ನಂತರ 1899ರಲ್ಲಿ ಪ್ರಕಟವಾಯಿತು. ಇದೀಗ 3ನೇ ಆವೃತ್ತಿ. ಮೈಸೂರು ಸಂಸ್ಥಾನದ ವಿದ್ಯಾ ಇಲಾಖೆಯು ವಿದ್ಯಾಲಯಗಳಲ್ಲಿ ಇಡುವ ಕೃತಿ ಎಂದು ಪಠ್ಯ ಪುಸ್ತಕ ಸಮಿತಿಯು ನಿರ್ಣಯಿಸಿತ್ತು. ಆಂಗ್ಲ ಕವಿ ಷೇಕ್ ಸ್ಪೀಯರ್‍ ಅವರ ‘ಕಾಮಿಡಿ ಆಫ್ ಎರರ್‍ಸ್’ ನಾಟಕವನ್ನು ಬಂಗಾಳಿಯ ಕವಿ ಈಶ್ವರಚಂದ್ರ ವಿದ್ಯಾಸಾಗರ ಅವರು ನಾಟಕದ ಪಾತ್ರಗಳ ಹೆಸರುಗಳನ್ನು ಹಿಂದೂ ಧರ್ಮೀಯವಾಗಿಸಿ ಕಥಾ ರೂಪ ನೀಡಿದ್ದರು., ಇದು ಚಮತ್ಕಾರಕವಾಗಿಯೂ ಮತ್ತು ಭ್ರಾಂತಿಕಾರಕವಾಗಿಯೂ ಇತ್ತು. ಅದನ್ನು ಕನ್ನಡಕ್ಕೆ ತರಬೇಕೆಂಬ ಅದಮ್ಯ ಆಸಕ್ತಿಯ ಫಲವೇ ಈ ಕೃತಿ. ಕಥಾರೂಪದ ಈ ಕೃತಿಯನ್ನು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾಗಿ ಲೇಖಕರು ಹೇಳಿದ್ದಾರೆ.

About the Author

ಬಿ. ವೆಂಕಟಾಚಾರ್ಯ

ಅನುವಾದಕ, ಕಾದಂಬರಿಕಾರ ಬಿ. ವೆಂಕಟಾಚಾರ್ಯ ಅವರು ಕನ್ನಡಿಗರಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಕಾರಣರಾದವರು. ಚಾಮರಾಜನಗರ ತಾಲ್ಲೂಕು ಕೊಳ್ಳೆಗಾಲದಲ್ಲಿ 1845ರಲ್ಲಿ ಜನಿಸಿದ ಅವರು ಸಂಸ್ಕೃತ, ಕನ್ನಡ, ಇಂಗ್ಲಿಷ್ ಹಾಗೂ ಬಂಗಾಳಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಬಂಗಾಳಿ ಬರಹಗಾರ ಬಂಕಿಮಚಂದ್ರರ ಕಾದಂಬರಿಗಳನ್ನು ಕನ್ನಡ ಜನತೆಗೆ ಪರಿಚಯಿಸಿದವರಲ್ಲಿ ಇವರೇ ಮೊದಲಿಗರು. ಕನ್ನಡಿಗರ ವಾಚನ ಅಭಿರುಚಿಗಳು ಬೆಳೆಯಲು ಗಟ್ಟಿಯಾದ ತಳಹದಿ ಹಾಕಿದ ಅವರು ಅಪ್ರತ್ಯಕ್ಷ ಗುರುವಾದ ಈಶ್ವರಚಂದ್ರ ವಿದ್ಯಾಸಾಗರರ `ಭ್ರಾಂತಿವಿಲಾಸ'ವೇ ಅವರು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದರು. ಇದು ಬಂಗಾಳಿಯಿಂದ ಕನ್ನಡಕ್ಕೆ ಅವರು ಅನುವಾದಿಸಿದ ಮೊದಲ ಗ್ರಂಥ. ಈ ಗ್ರಂಥವನ್ನು ಮದರಾಸು ವಿಶ್ವವಿದ್ಯಾಲಯ ಪಠ್ಯಪುಸ್ತಕವಾಗಿ ಅಂಗೀಕರಿಸಿದ್ದರಿಂದ ...

READ MORE

Related Books