ಬ್ರಹ್ಮಶ್ರೀ ನಾರಾಯಣ ಗುರುಗಳ ಸಾಮಾಜಿಕ ತತ್ವಚಿಂತನೆ

Author : ಡಿ.ಬಿ. ಕಾರಿಯಪ್ಪ

Pages 108

₹ 100.00




Year of Publication: 2015
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಕೇರಳದಲ್ಲಿ ಒಂದು ಕಾಲಕ್ಕೆ ಅಸಮಾನತೆಯೇ ನೆಲೆಗೊಂಡಿತ್ತು. ಮೇಲ್ವರ್ಗದವರು ಕೆಳವರ್ಗದ ಜನರನ್ನು ಧರ್ಮದ ಸೋಗಿನಲ್ಲಿ ಹೊಸಕಿ ಹಾಕುತ್ತಿದರು. ನಿತ್ಯನೋವು, ಅವಮಾನಗಳೇ ತುಂಬಿತ್ತು. ಕೆಳ ವರ್ಗದವರಿಗೆ ಶಾಲೆ ದೇವಾಲಯಗಳಿಗೆ ಮುಕ್ತ ಪ್ರವೇಶವಿರಲಿಲ್ಲ. ಅತ್ಯಂತ ಅಮಾನವೀಯ ಕಾನೂನುಗಳನ್ನು ನಿರ್ಮಿಸಿಕೊಂಡು ಕೆಳವರ್ಗದ ಜನರನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ಹಿಂಸಿಸುತ್ತಿದ್ದರು. ಈ ಕಾರಣದಿಂದ ನಾರಾಯಣಗುರುಗಳು ಈ ವರ್ಗಭೇದವನ್ನು ತೊಡೆದು ಹಾಕುವುದನ್ನೇ ತಮ್ಮ ಜೀವನದ ಗುರಿಯನ್ನಾಗಿಸಿಕೊಳ್ಳುತ್ತಾರೆ.  ಮತ್ತು ತುಳಿತಕ್ಕೊಳಗಾದ ಜನಾಂಗಕ್ಕಾಗಿ ಶಾಲೆ-ದೇವಾಲಯಗಳನ್ನು ನಿರ್ಮಿಸುತ್ತಾರೆ. ಆ ದೇವಾಲಯಗಳಲ್ಲಿ ಕೆಳ ವರ್ಗದ ಜನರನ್ನೇ ಪೂಜಾರಿಗಳನ್ನಾಗಿ ನೇಮಿಸುತ್ತಾರೆ. ಆ ಮುಖೇನ ಮೇಲ್ವರ್ಗದವರ ದಬ್ಬಾಳಿಕೆಗೆ ಸೆಡ್ಡು ಹೊಡೆದು, ಅಸಮಾನತೆ ಮತ್ತು ಶೋಷಣೆಗಳ ನಿವಾರಣೆಗೆ ದುಡಿಯುತ್ತಾರೆ. ಧರ್ಮಗಳ ತಿಕ್ಕಾಟದಿಂದ ಯುದ್ದ-ರಕ್ತಪಾತಗಳನ್ನು ಕಂಡ ನಾರಾಯಣಗುರುಗಳು - ವಿಶ್ವಧರ್ಮದ ಅಡಿಪಾಯದ “ಮಾನವ ಜಾತಿಯೊಂದೇ, ದೇವನೊಬ್ಬನೇ ಹಾಗೂ ಧರ್ಮವೊಂದೇ ಮನುಕುಲಕೆ” ಎಂಬ ಘೋಷ ವಾಕ್ಯವನ್ನು ಅಂಗೀಕರಿಸಿ ತಮ್ಮ ಸಕಲ ಆಚಾರ ವಿಚಾರ ಕ್ರಿಯೆಗಳಲ್ಲಿ ಈ ತತ್ವವನ್ನೇ ಬಿತ್ತರಿಸಿದರು ಹೋರಾಟಮಯ ಜೀವನದಿಂದ ಸಮ ಸಮಾಜದ ರೂವಾರಿಗಳಾಗಿ ಜನಮಾನಸದಲ್ಲಿ ಸಮಾನತೆಯ, ಸರ್ವೋದಯದ, ಭ್ರಾತೃತ್ವದ ಮತ್ತು ಮಾನವೈಕ್ಯತೆಯ ಬೀಜಗಳನ್ನು ಬಿತ್ತಿ ಹೋಗಿದ್ದಾರೆ. ಈ ಎಲ್ಲ ಆಶಯ-ಅಂಶಗಳನ್ನು ಡಾ.ಕಾರಿಯಪ್ಪ ಅವರು ತಮ್ಮ ಕೃತಿಯಲ್ಲಿ ಬಹು ಮನೋಜ್ಞವಾಗಿ ವಿಶ್ಲೇಷಿಸುವ ಮುಖಾಂತರ ನಾರಾಯಣಗುರುಗಳ ಕುರಿತು ಆಕರ ಗ್ರಂಥವೊಂದನ್ನು ಕನ್ನಡನಾಡಿಗೆ ಧಾರೆ ಎರೆದಿದ್ದಾರೆ. 

Related Books