ಬಿಡಾರ

Author : ಚಂದ್ರಕಾಂತ ಪೋಕಳೆ

Pages 256

₹ 250.00




Year of Publication: 2023
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080 - 2661 7100 / 2661 7755

Synopsys

`ಬಿಡಾರ’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಆತ್ಮಕಥನವಾಗಿದೆ. ದಲಿತರ ಆತ್ಮಕಥೆಗಳಲ್ಲಿ ದಲಿತರ ಶೋಷಣೆ, ಸವರ್ಣೀಯರ ದೌರ್ಜನ್ಯ, ಅವರು ಅನುಭವಿಸಿದ ಅಪಾರ ವೇದನೆ, ತೊಳಲಾಟ, ಪಟ್ಟ ಸಂಕಟ, ನಡೆಸಿದ ಚಳವಳಿ, ಹೀಗೆ ಒಟ್ಟಾರೆಯಾಗಿ ಗತಕಾಲದ ಚರಿತ್ರೆಯ ದುರಂತ ಚಿತ್ರಣ ವ್ಯಕ್ತವಾಯಿತು. ಇದೊಂದು ರೀತಿಯ ಸಾಮಾಜಿಕ, ಸಾಂಸ್ಕೃತಿಕ ದಸ್ತಾವೇಜು ಎನಿಸಿತು. ಅಂಥ ಹತ್ತಾರು ಮರಾಠಿ ದಲಿತ ಆತ್ಮಕಥೆಗಳು ಕನ್ನಡಕ್ಕೆ ಭಾಷಾಂತರಗೊಂಡವು. ಅಶೋಕ ಪವಾರ ಅವರ ‘ಬಿಡಾರ’ ಅಂಥದೊಂದು ಮಹತ್ವದ ದಲಿತ ಆತ್ಮಕಥೆ. ಅಲೆಮಾರಿ ಜೀವನ ಸಾಗಿಸುವ ಇಡೀ ಸಮುದಾಯದ ಕಥೆಯು ಹೃದಯ ಹಿಂಡುವಷ್ಟು ಪ್ರಖರವಾಗಿ ಮಾಡಿ ಬಂದಿದೆ. ಇದು ಕಲ್ಲು ಕಡೆದು, ಮನೆ, ಕೆರೆ, ಒಡ್ಡುಗಳನ್ನು ಕಟ್ಟುವ ಸಮುದಾಯದವರ ಕಥನ. ಇವರಿಗೆ ಯಾವುದೇ ಶಾಶ್ವತವಾದ ಊರಿಲ್ಲ, ಮನೆಯಿಲ್ಲ, ಆಸ್ತಿಪಾಸ್ತಿಯಿಲ್ಲ, ಹೊಲಗದ್ದೆಯಿಲ್ಲ. ಇಂದು ಒಂದು ಊರಾದರೆ, ನಾಳೆ ಮತ್ತೊಂದೂರು. ಊರೂರು ತಿರುಗಾಡಿ, ಕಲ್ಲು ಒಡೆದು ಹೊಟ್ಟೆ ಹೊರೆಯುವುದೇ ಇವರ ಜೀವನ ಕ್ರಮ. ಈ ಜೀವನ ಯಾತ್ರೆಯಲ್ಲಿ ಅನುಭವಿಸಿದ ನೋವು, ಹಸಿವು, ಸಂಕಟ, ಪೋಲೀಸ್ ದೌರ್ಜನ್ಯ - ಮುಂತಾದವುಗಳ ಚಿತ್ರಣ ಕರುಳು ಹಿಂಡುವಷ್ಟು ಸಶಕ್ತವಾಗಿ ಮೂಡಿ ಬಂದಿದೆ.

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books