ಬಿಡುಗಡೆಗಾಗಿ ಬರಹ

Author : ನೀಲತ್ತಹಳ್ಳಿ ಕಸ್ತೂರಿ

Pages 120

₹ 15.00




Year of Publication: 1983
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ಬಿಡುಗಡೆಗಾಗಿ ಬರಹ ಇತಿಹಾಸ ಬರಹಗಳ ಪುಸ್ತಕವನ್ನು ನೀಲತ್ತಹಳ್ಳಿ ಕಸ್ತೂರಿ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ದಾಸ್ಯದ ಸಂಕೋಲೆಯಿಂದ ತಾಯಿ ಭಾರತಿಯನ್ನು ಪಾರುಗಾಣಿಸಲು ಲೇಖನಿ ಹಿಡಿದು ಹೋರಾಟ ನಡೆಸಿದವರತ್ತ ಒಂದು ಇಣುಕುನೋಟವಿದೆ. ಭಾರತದ ಸ್ವಾತಂತ್ರ್ಯಾಕಾಂಕ್ಷೆ ಕಾಂತಿಯುತವಾಗಿ ಸುವ್ಯಕ್ತಗೊಂಡ ಬರಹಗಳ ಬಿಂಬ ಇದು. ಅರವಿಂದ, ಗಾಂಧೀಜಿಯವರಂತೆಯೇ ಈ ನಿಟ್ಟಿನಲ್ಲಿ ಬಿಡುಗಡೆಗಾಗಿ ಬರೆದ ಭಾರತ ಪ್ರೇಮಿ ಪಾಶ್ಚಾತ್ಯರ ಕೊಡುಗೆ ಏನೆಂಬುದರ ಮೌಲ್ಯಮಾಪನ ಎಂದು ಈ ಕೃತಿಯ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.

About the Author

ನೀಲತ್ತಹಳ್ಳಿ ಕಸ್ತೂರಿ
(29 September 1931)

ನೀಲತ್ತಹಳ್ಳಿ ಕಸ್ತೂರಿಯವರು ಮಾಗಡಿಯಲ್ಲಿ ಸೆಪ್ಟೆಂಬರ್ 29, 1931ರಂದು ಜನಿಸಿದರು. ತಂದೆ ವೆಂಕಟಾಚಾರ್ಯ, ತಾಯಿ ಸೀತಮ್ಮ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಅವರೊಬ್ಬ ಉತ್ತಮ ಅನುವಾದಕರು. ಚೀನಾ ಜಪಾನ್ ಕತೆಗಳು (ಅನುವಾದ) (ಕಾದಂಬರಿ), ಇದು ಭಾರತದ ದಾರಿ (ನಾಟಕ) ರಾಜೇಂದ್ರ ಪ್ರಸಾದ್, ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ, ಸಿದ್ಧವನಹಳ್ಳಿ ಕೃಷ್ಣಶರ್ಮ - ವ್ಯಕ್ತಿ ಮತ್ತು ಶಕ್ತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ...

READ MORE

Related Books