ಬಿಜ್ಜಳ ನ್ಯಾಯ ಮತ್ತು ಇತರೆ ಖಂಡ ಕಾವ್ಯಗಳು

Author : ಎಸ್.ಜಿ. ಸಿದ್ಧರಾಮಯ್ಯ

Pages 122

₹ 135.00




Year of Publication: 2016
Published by: ಅನುಗ್ರಹ ಪ್ರಕಾಶನ
Address: ನಂ. 690, 80 ಅಡಿ ರಸ್ತೆ, ಕನಕದಾಸ ನಗರ,ತ್ರಿವೇಣಿ ಸೂಪರ್‍ ಮಾರ್ಕೆಟ್ ಹತ್ತಿರ, ದತ್ತಗಳ್ಳಿ 3ನೇ ಹಂತ ಮೈಸೂರು – 570022.
Phone: 9980808031

Synopsys

ಖ್ಯಾತ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರ ಕೃತಿ-ಬಿಜ್ಜಳ ನ್ಯಾಯ ಮತ್ತು ಇತರೆ ಖಂಡ ಕಾವ್ಯಗಳು. ಹಾಲುಮತ ಪುರಾಣವನ್ನು ಆಧರಿಸಿ ಅರಸ ಬಿಜ್ಜಳನ ಕುರಿತು ಹಾಗೂ ಬಸವಣ್ಣನ ಮಧ್ಯೆ ಅವರ ವೈಷಮ್ಯವೇನೂ ಇರಲಿಲ್ಲ. ಇದ್ದಿದ್ದರೆ ಬಸವಣ್ಣನ ಚಳವಳಿ ಇಷ್ಟು ದೂರ ಸಾಗಿ ಬರುತ್ತಿರಲಿಲ್ಲ ಎಂಬ ವಿಚಾರದೊಂದಿಗೆ ಇತರೆ ಖಂಡಕಾವ್ಯಗಳನ್ನು ವಿಶ್ಲೇಷಿಸಿದ ಕೃತಿ ಇದು.

About the Author

ಎಸ್.ಜಿ. ಸಿದ್ಧರಾಮಯ್ಯ
(19 November 1946)

ಹಿರಿಯ ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ. ತಂದೆ-ಗುರುಭಕ್ತಯ್ಯ, ತಾಯಿ-ರೇವಮ್ಮ. ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದ ಅವರು  ಪ್ರೌಢಶಾಲೆ ಚಿಕ್ಕನಾಯಕನಹಳ್ಳಿ ಪೂರ್ಣಗೊಳಿಸಿದರು. ಕಾಲೇಜು ವಿದ್ಯಾಭ್ಯಾಸವನ್ನು ತುಮಕೂರಿನಲ್ಲಿ ಆರಂಭಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಆನಂತರ ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ಮಡಿಕೇರಿ, ಸಿಂಧನೂರು, ತುಮಕೂರು, ಕೊರಟಗೆರೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ತುಮಕೂರು, ಚಿಕ್ಕನಾಯಕನ ಹಳ್ಳಿ, ಹೊಸದುರ್ಗ, ಮಧುಗಿರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಹುದ್ದೆ ನಿರ್ವಹಿಸಿದ್ದಾರೆ. ಅಲ್ಲದೇ ದುಃಸ್ಥಿತಿಯಲ್ಲಿದ್ದ ಕಾಲೇಜುಗಳಿಗೆ ಶೈಕ್ಷಣಿಕ ಕಾಯಕಲ್ಪ ...

READ MORE

Related Books