ಬಿರುಗಾಳಿಗಳೇ ಶಾಂತರಾಗಿರಿ

Author : ಕಾಶೀನಾಥ ಅಂಬಲಗೆ

Pages 64

₹ 50.00




Year of Publication: 2012
Published by: ಪ್ರಗತಿ ಪ್ರಕಾಶನ
Address: ಜಯನಗರ ವಿಶ್ವವಿದ್ಯಾಲಯ ರಸ್ತೆ, ಕಲಬುರ್ಗಿ- 595105

Synopsys

‘ಬಿರುಗಾಳಿಗಳೇ ಶಾಂತರಾಗಿರಿ’ ಕಾಶೀನಾಥ ಅಂಬಲಗೆ ಅವರ ಅನುವಾದಿತ ಗಜಲ್ ಸಂಕಲನ. ಜೀವನಪ್ರೀತಿಗೆ ಕಾವ್ಯಪ್ರೀತಿಯ ಶೃತಿ ಸೋಬತಿ ಇವರನ್ನು ಹಿಂದಿಯ ಸಂವೇದನಾಶೀಲ ಕವಿ ಕುಮಾರ ಬೇಚೈನ ಅವರ ಗಜಲ್ ಗಳನ್ನು ಕನ್ನಡಕ್ಕೆ ಅನುವಾದಿಸುವಂತೆ ಮಾಡಿದೆ.

ಗಜಲ್ ಉರ್ದು ಕಾವ್ಯಲೋಕದ ಹಣೆಮಣಿ. ಭಾರತೀಯರ ಉತ್ಕೃಷ್ಠ ಶೃಂಗಾರ ಭಾವಕ್ಕೆ ವಾಹಕವಾಗಿರುವ ಉರ್ದುವಿನ ಕಾವ್ಯಲೋಕದದ ರಸಯಾತ್ರೆಗೆ ಗಜಲ್ ಪ್ರಕಾರವೇ ಮುಖ್ಯ ಪಥಿಕ. ಕೈ ಮುಟ್ಟಿದರೆ ಮಾಸುತ್ತವೆ ಎಂಬಷ್ಟು ಮೃದು ಮಧುರ ಪದಬಂಧಗಳ ಜೀಕುವಿಕೆಯಲ್ಲಿ ಮನದಾಳದ ಅತಿಸೂಕ್ಷ್ಮ ಅವ್ಯಕ್ತ ಭಾವಗಳಿಗೆ ಆಕಾರ ಕೊಡಬಲ್ಲ ತಾಕತ್ತು ಉರ್ದುವಿನ ಗಜಲ್ ಗಳಿಗೆ ದಕ್ಕಿದಷ್ಟು ಇನ್ಯಾವುದೇ ಕಾವ್ಯ ಪ್ರಕಾರಗಳಿಗೆ ದಕ್ಕಿರಲಾರದು. ಉರ್ದುವಿನ ವೈಶಿಷ್ಟ್ಯವೇ ಇದಾಗಿದೆ. ಉರ್ದುವಿನ ಗಜಲ್ ಗಳನ್ನು ಕಾಶೀನಾಥ ಅಂಬಲಗೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.ಇಂಥದೊಂದು ಅನುಭವವನ್ನು ಕನ್ನಡ ಕಾವ್ಯಲೋಕಕ್ಕೆ ಒದಗಿಸುವ ಗಂಭೀರ ಪ್ರಯತ್ನವನ್ನುಮಾಡಿದ್ದಾರೆ. ಈ ಅನುವಾದಗಳ ಓದುವಿಕೆ ಕನ್ನಡದಲ್ಲಿ ಸ್ವತಂತ್ರ ಗಜಲ್ ರಚಿಸುವವರಿಗೆ ದಾರಿದೀಪವಾಗಬಲ್ಲದು.

About the Author

ಕಾಶೀನಾಥ ಅಂಬಲಗೆ
(10 July 1947)

ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.  ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...

READ MORE

Related Books