ಬಿಸಿಲ ಹೂ

Author : ದಸ್ತಗೀರ್‌ಸಾಬ್‍ ದಿನ್ನಿ

Pages 110

₹ 70.00




Year of Publication: 2018
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018
Phone: 080- 26612991

Synopsys

ರಾಯಚೂರು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ಪ್ರಕಟಿಸಲಾದ ಗಜಲ್ ಗಳ ಸಂಕಲನ ಮತ್ತು ಗಜಲ್ ಕುರಿತಾದ ಬರಹಗಳನ್ನು ಈ ಗ್ರಂಥದಲ್ಲಿ ಸಂಕಲಿಸಲಾಗಿದೆ. ಪುಸ್ತಕವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆ ಭಾಗದಲ್ಲಿ ಲೇಖನಗಳಿವೆ. ಶಾಂತರಸ, ನಟರಾಜ ಬೂದಾಳು, ಜಂಬಣ್ಣ ಅಮರಚಿಂತ, ಡಿ.ಆರ್. ನಾಗರಾಜ, ಫಕೀರ ಮುಹಮ್ಮದ್ ಕಟ್ಪಾಡಿ, ಚಿದಾನಂದ ಸಾಲಿ ಅವರು ಗಜಲ್ ಗಳ ಸ್ವರೂಪ, ವಿಕಾಸ, ಗ್ರಹಿಕೆಗಳ ಕುರಿತು ಬರೆದಿರುವ ಲೇಖನಗಳನ್ನು ನೀಡಲಾಗಿದೆ. ಗಜಲ್ ಗಳಿಗೆ ಇದೊಂದು ಉತ್ತಮ ಪ್ರವೇಶಿಕೆ. ಹಾಗೆಯೇ ಗಜಲ್ ಬಗ್ಗೆ ಅಧ್ಯಯನ ನಡೆಸುವವರಿಗೆ ಇದೊಂದು ಮಹತ್ವಪೂರ್ಣ ಆಕರ ಒದಗಿಸುತ್ತದೆ. ಎರಡನೆಯ ಭಾಗದಲ್ಲಿ ಸೊಗಸಾದ, ಓದಿನ ಸುಖಕ್ಕೆ ತೆರೆದುಕೊಳ್ಳುವ ಗಜಲ್ ಗಳಿವೆ. ವಿವಿಧ ಕವಿಗಳು ಬರೆದಿರುವ 26 ಕವಿಗಳ 52 ಗಜಲ್ ಗಳನ್ನು ಸಂಕಲಿಸಲಾಗಿದೆ. ಇದು ರಾಯಚೂರು ಜಿಲ್ಲೆಯ ಕವಿಗಳ ಗಜಲ್ ಗಳನ್ನು ಒಳಗೊಂಡಿದೆ. ಒಂದು ಜಿಲ್ಲೆಯ ಒಂದು ಸಾಹಿತ್ಯ ಪ್ರಕಾರಕ್ಕೆ ಸೇರಿದ ಇಷ್ಟೊಂದು ಜನ ಕವಿಗಳು ಇರುವುದು ಸೋಜಿಗ ಮತ್ತು ಖುಷಿಯ ಸಂಗತಿ. ಕೇವಲ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲದೆ ಗುಣಮಟ್ಟದ ದೃಷ್ಟಿಯಿಂದಲೂ ಕನ್ನಡದ ಅತ್ಯುತ್ತಮ ಗಜಲ್ ಗಳನ್ನು ಈ ಸಂಕಲನದಲ್ಲಿ ನೋಡಬಹುದು. ನಿಜವಾದ ಅರ್ಥದಲ್ಲಿ ಇದೊಂದು ಪ್ರಾತಿನಿಧಿಕ ಸಂಕಲನ, ಅದು ಕೇವಲ ರಾಯಚೂರು ಜಿಲ್ಲೆಗೆ ಮಾತ್ರ ಸೀಮಿತ ಎಂದು ಭಾವಿಸಬೇಕಿಲ್ಲ. ಪ್ರಾದೇಶಿಕತೆಯ ಗಡಿಯನ್ನೂ ಮೀರಿದ ಗಜಲ್ ಗಳು ಈ ಸಂಕಲನದಲ್ಲಿವೆ. ಗಜಲ್ ಪ್ರಿಯರಿಗೆ ರಸದೌತಣ ನೀಡುವುದರಲ್ಲಿ ಅನುಮಾನವಿಲ್ಲ.

About the Author

ದಸ್ತಗೀರ್‌ಸಾಬ್‍ ದಿನ್ನಿ
(01 June 1971)

ರಾಯಚೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕವಿ-ಲೇಖಕ ದಸ್ತಗೀರ್‌ಸಾಬ ದಿನ್ನಿ, ತಾಳಕೇರಿ ಬಸವರಾಜ, ಬಿಸಿಲ ಹೂ, ಎಲ್ಲಾ ಕಾಲದ ಬೆಳಕು, ಆದಯ್ಯ, ಹೊಸಗನ್ನಡ ಕಥಾಸಂಗ್ರಹ, ಹಗೇವು, ದಿನ್ನಿ ತಾಳಪಲ್ಲಿ ವೆಂಕಯ್ಯ, ಸಾಹಿತ್ಯ ಸಲ್ಲಾಪ, ಜಾಗತೀಕರಣ ಮತ್ತು ಸಂಸ್ಕೃತಿ ಅವರ ಪ್ರಕಟಿತ ಕೃತಿಗಳು. ರಾಯಚೂರು ತಾಲೂಕಿನ ದಿನ್ನಿ ಗ್ರಾಮದಲ್ಲಿ ಜನನ.ಕವನ , ಗಜಲ್ , ಲೇಖನ, ವಿಮರ್ಶೆ ಬರೆದಿದ್ದಾರೆ. ...

READ MORE

Related Books