ಬಿಸಿಲು - ಬೆಳದಿಂಗಳು

Author : ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

Pages 121

₹ 30.00




Year of Publication: 2008
Published by: ಸಾಹಿತ್ಯಸಿರಿ
Address: ಶ್ರೀತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ- 577541

Synopsys

‘ಬಿಸಿಲು - ಬೆಳದಿಂಗಳು’ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಅಂಕಣ ಬರಹಗಳ ಸಂಕಲನ. ಪ್ರಬಂಧದ ಮಾದರಿಯಲ್ಲಿರುವ ಇಲ್ಲಿನ ಲೇಖನಗಳು ವೈವಿಧ್ಯಮಯ ವಸ್ತು-ವಿಷಯಗಳಿಂದ ಕೂಡಿವೆ. ಕೀರ್ತಿಶನಿ, ಸ್ವಾತಂತ್ರ್ಯ ಹೋರಾಟಗಾರರು v/s ಟೆಕೆಟ್ಟು ಹೋರಾಟಗಾರರು, ಹಳ್ಳಿಗರ ಉಸಿರು ಬಸವಣ್ಣ, ಧರ್ಮ ಸಮನ್ವಯ, ಹೀಗೆ ಇಲ್ಲಿನ ಬಹುಪಾಲು ಲೇಖನಗಳಲ್ಲಿ ಪ್ರಗತಿಪರ ಚಿಂತನೆಯ ಜತೆಗೆ ಹಾಸ್ಯಲೇಪನವಿದ್ದು ವಾಸ್ತವಿಕ ಬದುಕಿನ ಸಾಮಾಜಿಕ ಚಿತ್ರಣವನ್ನು, ಬಿರುಕನ್ನು ಎತ್ತಿ ತೋರಿಸಿ, ಆಲೋಚಿಸುವಂತೆ ಮಾಡುತ್ತವೆ. ಬಹುಪಾಲು ಲೇಖನಗಳು ಸಾಮಾಜಿಕ ಒಡನಾಟದ ಮೂಲಕ, ಅನುಭವದಿಂದಗಳಿಸಿದ ತಿಳುವಳಿಕೆಯ ಚಿಂತನೆಗಳಾಗಿದ್ದು, ಸರಳವಾಗಿ ಓದಿಸಿಕೊಂಡು ಹೋಗುತ್ತವೆ.

About the Author

ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರ್ನಾಟಕದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಕಾರಿಗಳು. ಒಂದು ಧಾರ್ಮಿಕ ಪೀಠದ ಸಮಸ್ತ ಕಾರ್ಯಚಟುವಟಿಕೆಗಳ ಸುಸೂತ್ರ ನಿರ್ವಹಣೆಗೆ ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವನ್ನು ಭಾರತ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಳವಸಿಕೊಂಡು, ಇಂದಿಗೂ ಅದನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವ ಕೀರ್ತಿಗೆ ಪಾತ್ರರಾಗಿದ್ದಾರೆ. ಭಾರತೀಯ ಪರಂಪರೆಯಿಂದ ಬಂದ ಸಾಂಪ್ರದಾಯಿಕ ಜ್ಞಾನ ಮತ್ತು ಪಾಶ್ಚಿಮಾತ್ಯ ಆಧುನಿಕ ತಂತ್ರಜ್ಞಾನ ಎರಡನ್ನೂ ವಿಶಿಷ್ಟ ರೀತಿಯಲ್ಲಿ ಬೆರೆಸಿ ಹದಗೊಳಿಸಿಕೊಂಡು ಬಳಸುತ್ತಿರುವ ಇವರ ಸಾಧನೆಗಳು ಹಲವಾರು. ಸಂಸ್ಕೃತ ವ್ಯಾಕರಣ ಕುರಿತು ಆಧುನಿಕ ರೀತಿಯಲ್ಲಿ ಅಧ್ಯಯನ ನಡೆಸಲು ಅನುವುಮಾಡಿಕೊಡುವ ಇವರ ‘ಗಣಕಾಷ್ಟಾಧ್ಯಾಯಿ’ ತಂತ್ರಾಂಶ ಮತ್ತು ...

READ MORE

Related Books