ಬಿಟ್ಟು ಹೋದ ಪುಟಗಳು ಸಂಪುಟ-2

Author : ಪಿ. ಲಂಕೇಶ್

Pages 281

₹ 250.00




Year of Publication: 2015
Published by: ಲಂಕೇಶ್ ಪ್ರಕಾಶನ
Address: ನಂ. 9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080-26676427

Synopsys

‘ಬಿಟ್ಟು ಹೋದ ಪುಟಗಳು ಸಂಪುಟ- 2’ ಲೇಖಕ, ಪತ್ರಕರ್ತ ಪಿ. ಲಂಕೇಶ್ ಅವರ ಲೇಖನ ಸಂಕಲನ. ಕೃತಿಯಲ್ಲಿ ಲಂಕೇಶ್ ಭಾರತದ ರಾಜಕೀಯದ ಅಸಮಾನತೆಯ ಬಗ್ಗೆ ಮಾತಾನಾಡುತ್ತಾ ಧರ್ಮಾಂಧ ರಾಜಕಾರಣಿಗಳ, ಸಂಘಟನೆಗಳ ನೀಚ ನಡೆಯುನ್ನು ಖಂಡಿಸುತ್ತಾರೆ. ಬಾಬ್ರಿ ಮಸೀದಿ ಧ್ವಂಸ ಸೇರಿದಂತೆ ಗಾಂಧಿಯ ಕುರಿತಾದ ಬರಹಗಳೂ ಇಲ್ಲಿವೆ. ಸಂವಿಧಾನವಿದೆ ಎನ್ನುತ್ತಲೇ ತಮ್ಮ ನಿಲುವನ್ನು, ಸಮಾಜವಾದಿ ಧೋರಣೆಯೊಂದಿಗೆ ವಾಸ್ತವವನ್ನು ವಿವರಿಸಿದ್ದಾರೆ. ಈ ಕೃತಿಯ ಬಗ್ಗೆ ಬರೆಯುತ್ತಾ ಕೆಲವು ಘಟನೆಗಳನ್ನು ಲಂಕೇಶ್ ನೆನೆಯುತ್ತಾರೆ. ಮೊನ್ನೆ ಭಾನುವಾರ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಒಡೆದು ಬೀಳಿಸಿದ ಸಮಾಜಘಾತುಕ ಶಕ್ತಿಗಳು ಬೆಳೆದುಬಂದಿರುವ ಬಗೆಯನ್ನು ಎಲ್ಲರೂ ಮತ್ತೊಮ್ಮೆ ಗಮನಿಸಬೇಕು ಎನ್ನುವ ಅವರು ಭಾರತದಿಂದ ಬೌದ್ಧ ಧರ್ಮವನ್ನು ಓಡಿಸಿದ, ವರ್ಣಭೇದವನ್ನು ರೂಪಿಸಿ ನಮ್ಮ ಜನತೆಯನ್ನು ಘೋರ ಮೌಡ್ಯ, ಬಡತನದಲ್ಲಿ ಬೀಳಿಸಿ ಪರಕೀಯರಿಗೆ ಶರಣಾಗುವಂತೆ ಮಾಡಿದ, ನಲವತ್ತ ನಾಲ್ಕು ವರ್ಷದ ಹಿಂದೆ ಬಾಪುವನ್ನು ಕೊಲೆ ಮಾಡಿದ ಈ ಶಕ್ತಿಗಳು ಕಳೆದ ನಾಲೈದು ವರ್ಷದಿಂದ ಭಾರತೀಯರ ಕಣ್ಣಿಗೆ ಮಣ್ಣೆರಚಿ ಅಧಿಕಾರದ ಗದ್ದುಗೆ ಹಿಡಿಯಲು ಹವಣಿಸುತ್ತಿವೆ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ.

ರಾಮಾಯಣವನ್ನು ಚರಿತ್ರೆಯ ಮಟ್ಟಕ್ಕಿಳಿಸಿ, ಪುರುಷೋತ್ತಮನೂ ಪುರಾಣ ಪುರುಷನೂ ಆದ ಶ್ರೀರಾಮನನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲೆತ್ನಿಸಿದ ಆರೆಸ್ಸೆಸ್, ವಿಎಚ್‌ಪಿ, ಬಿಜೆಪಿ, ಭಜರಂಗದಳ, ಶಿವಸೇನೆಯ ಸಮಯಸಾಧಕರಿಗೆ ಅವರ ದುರಂತಮಯ ಕ್ರಿಯೆಗಳ ಬಗ್ಗೆ ಎಲ್ಲರೂ ವಿವರಿಸಬೇಕಾಗಿದೆ. ಭಾರತ ಅನೇಕ ಧರ್ಮ, ಜಾತಿಗಳ, ವಿವಿಧ ವರ್ಣ, ಸಂಸ್ಕೃತಿಗಳ ನಾಡು; ಭಾರತದ ವೈವಿಧ್ಯತೆಯೇ ಅದರ ಜೀವಾಳ ಎನ್ನುತ್ತಾರೆ. ಇಲ್ಲಿ ದುಷ್ಟಶಕ್ತಿಗಳು ಹಿಂದೂಗಳನ್ನೇ ಒಡೆದು ವಿವಿಧ ಜಾತಿಗಳನ್ನಾಗಿಸುವುದು, ಸಿಬ್ಬರನ್ನು ಹಿಂದೂಗಳ ವಿರುದ್ಧ, ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿ ಸ್ವಾರ್ಥ ಸಾಧಿಸುವುದು ಸುಲಭವೆನ್ನಿಸಬಹುದು; ಓಟಿಗಾಗಿ ಎಂಥ ವಂಚನೆಯನ್ನೂ ಮಾಡುವುದು ರಾಜಕೀಯ ಚಾಣಾಕ್ಷತೆ ಅನ್ನಿಸಬಹುದು; ಇವತ್ತಿನ ಕೆಲವರ ಲಾಭ ಎಲ್ಲಾ ಕಾಲದ ಎಲ್ಲರ ಹಿತಚಿಂತನೆಯಂತೆ ವಾದಿಸುವುದು ಸಾಧ್ಯ ಎನ್ನಿಸಬಹುದು. ಆದರೆ ಅದೆಲ್ಲ ಕಪಟ, ವಂಚನೆ ಎಂಬುದನ್ನು ಗಾಂಧೀಜಿ ತೋರಿಸಿಕೊಟ್ಟಿದ್ದಾರೆ; ಜಾತ್ಯತೀತತೆ ಮತ್ತು ಸಹನೆ ನಮ್ಮ ಪರಂಪರೆಯ ಅವಿಭಾಜ್ಯ ಅಂಗವೆಂಬುದನ್ನು ನಮ್ಮ ಸಂವಿಧಾನ ಕಲಿಸಿಕೊಟ್ಟಿದೆ ಎಂದು ಆತ್ಮಸ್ಥೈರ್ಯದೊಂದಿಗೆ ಧೈರ್ಯವನ್ನೂ ತುಂಬುತ್ತಾರೆ. ಅಂತಹ ಹಲವಾರು ಜಾಗತಿಕ ವಿಚಾರಗಳನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. 

About the Author

ಪಿ. ಲಂಕೇಶ್
(08 March 1935 - 25 January 2000)

ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...

READ MORE

Related Books