ಬೋಧಿಸತ್ವ

Author : ಗೀತಾ ಶೆಣೈ

Pages 64

₹ 50.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಕುಮಾರಕೃಪಾ ಪಶ್ಚಿಮ, ಬೆಂಗಳೂರು
Phone: 08030578020

Synopsys

19ನೇ ಶತಮಾನದ ಪ್ರಮುಖ ಭಾರತೀಯ ಸಂಸ್ಕೃತಿ ಚಿಂತಕರಲ್ಲಿ ಪಂಡಿತ ಧರ್ಮಾನಂದ ಕೊಸಾಂಬಿ ಒಬ್ಬರು. ಅವರು ರಚಿಸಿದ ನಾಟಕ ‘ಬೋಧಿಸತ್ವ’. ಈ ಕೃತಿಯನ್ನು ಗೀತಾ ಶೆಣೈ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಶಾಕ್ಯ ಕುಲದಲ್ಲಿ ಹುಟ್ಟಿದ ಗೌತಮನು ಬುದ್ಧನಾಗುವವರೆಗಿನ ಕಥೆ ಇದೆ. ಗೌತಮನು ರಾಜಕುವರನಾಗಿದ್ದು ಅವನಲ್ಲಿ ವೈರಾಗ್ಯ ಮೂಡಲು ಕೆಲವು ನಿರ್ದಿಷ್ಟ ಪ್ರಸಂಗಗಳು ಕಾರಣವಾಗಿದ್ದವು ಎಂಬ ಪ್ರಚಲಿತ ಕಥೆಗೆ ಭಿನ್ನವಾಗಿ ಧರ್ಮಾನಂದರು ಇಲ್ಲಿ ರಾಜಕೀಯ ಬಿಕ್ಕಟ್ಟಿನ ಮೂಲಕ ಗೌತಮನು ಜಗಕಲ್ಯಾಣದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಧಾರ್ಮಿಕ ಭಿಕ್ಷಾರ್ಥಿಯಾಗಿ ಸಂಬೋಧಿಯನ್ನು ಪಡೆದ ಕತೆಯನ್ನು ವಿವರಿಸಿದ್ದಾರೆ.

ಕೊಸಾಂಬಿ ಅವರು ತಮ್ಮ ಈ ನಾಟಕದಲ್ಲಿ ಅಳವಡಿಸಿಕೊಳ್ಳಲಾದ ಕಥೆಗೆ ಪ್ರಾಚೀನ ಗ್ರಂಥಗಳ ಆಧಾರವನ್ನು ಉಲ್ಲೇಖಿಸಿದ್ದಾರೆ.

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Conversation

Related Books