ಬೌದ್ಧಿಕ ಯಾತ್ರೆ

Author : ವಾಸಯ್ಯ ಎನ್

Pages 332

₹ 370.00




Year of Publication: 2022
Published by: ಬೊಂಬೆ ಪ್ರಕಾಶನ
Address: #617, 1ನೇ ಕ್ರಾಸ್, 2ನೇ ಹಂತ, ‘ಎಂ; ಬ್ಲಾಕ್, ಕುವೆಂಪು ನಗರ ಮೈಸೂರು

Synopsys

ಎಸ್.ಡಿ. ಶಶಿಕಲಾ ಅವರ ಅಭಿನಂದನಾ ಗ್ರಂಥ ಲೇಖಕ ವಾಸಯ್ಯ ಎನ್ ಅವರು ರಚಿಸಿದ ‘ಬೌದ್ಧಿಕ ಯಾತ್ರೆ’. ಈ ಕೃತಿಯು ಶಶಿಕಲಾ ಅವರ ಗುಣಲಕ್ಷಣವನ್ನು ಕಟ್ಟಿಕೊಡುತ್ತದೆ. ಇತ್ತೀಚಿನ ಕಾಲದ ಅಧ್ಯಾಪಕರಲ್ಲಿ ಅಧ್ಯಯನ ಅಧ್ಯಾಪನಗಳೊಡನೆ ಬರಹವೂ ಮೇಳೈಸುವುದು ಅಪರೂಪ. ಅದು ಮಹಿಳೆಯರ ಮಾತು ಬಂದಾಗ ಮತ್ತೂ ಮಹತ್ವ ಪಡೆಯುತ್ತದೆ. ಶಶಿಕಲಾ ಅವರ ಓದು ಹಾಗೂ ಬರಹದ ವ್ಯಾಪ್ತಿ ಹಿರಿದಾದದು. ಹಾಗೆಯೇ ಅವರ ವೈಚಾರಿಕತೆಯಲ್ಲಿಯೂ ಯಾವುದೇ ಮಡಿವಂತಿಕೆ ಅಥವಾ ಅನ್ಯತ್ವದ ಭಾವಗಳಿಂದ ಅತೀತವಾಗಿದ್ದು, ಆರೋಗ್ಯಕರವಾದುದಾಗಿದೆ. ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎಂದು ಯಾವುದೇ ಒಂದು ಮಾರ್ಗಕ್ಕೆ ಸೀಮಿತವಾಗಿರದೆ ಎಲ್ಲವನ್ನು ತನ್ನದಾಗಿಸಿಕೊಳ್ಳುವ ಅವರ ಹಂಬಲ ವೇದ್ಯವಾಗುತ್ತದೆ. ಅಂತೆಯೇ ಅವರ ನಿಲುವುಗಳು ಸದಾ ಸಮಾಜ ಮುಖಿಯಾಗಿರುತ್ತವೆ ಎಂಬುದನ್ನು ನಾವು ಇಲ್ಲಿ ಕಾಣಬಹುದು.

About the Author

ವಾಸಯ್ಯ ಎನ್
(10 August 1983)

ಡಾ. ವಾಸಯ್ಯ ಎನ್ ಅವರು ವಿಮರ್ಶಕರು. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಸ್ತಪ್ರತಿಗೆ (2017) ಬಹುಮಾನ ದೊರೆತಿದೆ.  ಕೃತಿಗಳು: ತುಂತುರು ಹನಿ, ವಸುಧೇಂದ್ರ ಅವರ ಸಣ್ಣ ಕತೆಗಳಲ್ಲಿ ಆಧುನೀಕರಣ, ವಸುಧೇಂದ್ರ ಅವರ ಪ್ರಬಂಧ ಸಾಹಿತ್ಯ ಅಧ್ಯಯನ, ಆರ್ತ ಧ್ವನಿ, ಕನ್ನಡ ಸಣ್ಣ ಕತೆಗಳಲ್ಲಿ ಮಳೆ ಮತ್ತು ಸಾಮಾಜಿಕ ಪ್ರಜ್ಞೆ, ಹೊಸಗನ್ನಡ ಕಾವ್ಯದಲ್ಲಿ ಮಳೆ, ಕವಿಯ ಮನದಲ್ಲಿ ಬುದ್ಧ,, ಸಂಶೋಧನಾ ಸಿರಿ.  ...

READ MORE

Related Books