ಬ್ರಿಟಿಷರ ವಿರುದ್ಧ ಜನತಾ ಬಂಡಾಯ

Author : ಅರವಿಂದ ಚೊಕ್ಕಾಡಿ

Pages 164

₹ 150.00




Year of Publication: 2021
Published by: ರೂಪ ಪ್ರಕಾಶನ
Address: ಮೈಸೂರು

Synopsys

‘ಬ್ರಿಟಿಷರ ವಿರುದ್ಧ ಜನತಾ ಬಂಡಾಯ’ ಕೃತಿಯು ಅರವಿಂದ ಚೊಕ್ಕಾಡಿ ಅವರ ವಸಾಹತು ಶಾಹಿ ಆಳ್ವಿಕೆಯ ಕುರಿತ ಕಥಾನಕವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಡಾ. ಪುಂಡಿಕ್ಯಾ ಗಣಪಯ್ಯ ಭಟ್ ಅವರು, ‘ವಸಾಹತು ಶಾಹಿ ಆಳ್ವಿಕೆಯ ವಿರುದ್ಧ ಅಂದಿನ ಕೊಡಗು-ಕೆನರಾ ಪ್ರದೇಶದಲ್ಲಿ 1834 -37 ರ ಅವಧಿಯಲ್ಲಿ ನಡೆದ ಜನತಾ ಬಂಡಾಯ ಕುರಿತು ವಿಭಿನ್ನ ರೂಪದ ಹಲವಾರು ಕೃತಿಗಳು ಪ್ರಕಟಗೊಂಡಿವೆ. ಇದರ ಬಗ್ಗೆ ಹೊಸದಾಗಿ ಪುಸ್ತಕವೊಂದನ್ನು ರಚಿಸುವುದು ಕಷ್ಟಕರವೂ ಹೌದು; ಸವಾಲೂ ಹೌದು. ಆದರೆ ಸಿದ್ಧ ಮಾದರಿಗಳಿಗಿಂತ ಭಿನ್ನವಾದ ಬಂಡಾಯದ ಹಲವು ಒಳನೋಟಗಳನ್ನು ಮತ್ತು ಹೊಸ ಹೊಳಹುಗಳನ್ನು ಹೊಂದಿರುವ ಈ ಕೃತಿಯನ್ನು ರಚಿಸುವ ಮೂಲಕ ಅರವಿಂದ ಚೊಕ್ಕಾಡಿಯವರು, ಕಷ್ಟಕರವಾದ ಸವಾಲನ್ನೆದುರಿಸುವಲ್ಲಿ ಬಹುಮಟ್ಟಗೆ ಯಶಸ್ವಿಯಾಗಿದ್ದಾರೆ.

ಕೃತಿಯ ಮೊದಲನೆಯ ಅಧ್ಯಾಯದಲ್ಲಿ ಬಂಡಾಯದ ಸ್ವರೂಪವನ್ನು ಬಹುಕೋನೀಯ ವಿಶ್ಲೇಷಣೆಗೆ ಒಳಪಡಿಸಿದ್ದು 'ಪ್ರಾದೇಶಿಕ ರಾಷ್ಟ್ರೀಯತೆಯ’ ವ್ಯಾಪ್ತಿಯೊಳಗೆ ಈ ಬಂಡಾಯವನ್ನು ಅರ್ಥೈಸಿಕೊಳ್ಳುವ ನೆಲೆಯಲ್ಲಿ ನೀಡಿರುವ ಸ್ವಾತಂತ್ರ ಹೋರಾಟ, ಕ್ರಾಂತಿ, ಲೂಟಿ ಮತ್ತು ರಾಷ್ಟ್ರೀಯ ಚಳವಳಿಗಳ ವ್ಯತ್ಯಾಸಗಳ ಕುರಿತ ವಿಶ್ಲೇಷಣೆಯು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ; ಮಾತ್ರವಲ್ಲದೆ , ದೇಶದ ಇತರ ಭಾಗಗಳಲ್ಲಿ ನಡೆದ ಹಲವು ಬಂಡಾಯಗಳನ್ನು ಪುನರ್ವಿಮರ್ಶಿಸುವ ದೃಷ್ಟಿಯಿಂದಲೂ ಇದು ಮಹತ್ವದ್ದಾಗಿದೆ. ‘ಕೊನೆಯಿಲ್ಲದ ಸಂವಾದ’ ಎಂಬ ಕೂನೆಯ ಅಧ್ಯಾಯದಲ್ಲಿ. ಬಂಡಾಯವು ಹುಟ್ಟಿಸಿದ ಪ್ರಶ್ನೆಗಳಿಗೆ ತಾರ್ಕಿಕವಾಗಿ ಹಾಗೂ ಸಮರ್ಥನೀಯವಾಗಿ ಉತ್ತರವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಡೀ ಬಂಡಾಯವನ್ನು ಗ್ರಹಿಸಿದ ದೃಷ್ಟಿ ಮತ್ತು ಅರ್ಥೈಯಿಸಿರುವ ಕ್ರಮ ವಿನೂತನವಾಗಿದೆ. ವಿಚಾರ ಮಂಡನೆಯಲ್ಲಿ ಸ್ಪಷ್ಟತೆ, ವ್ಯಕ್ತಪಡಿಸಿದ ಅಭಿಪ್ರಾಯಗಳಲ್ಲಿ ಖಚಿತತೆ, ಕೃತಿಯುದ್ದಕ್ಕೂ ಗುರುತಿಸಲು ಸಾಧ್ಯವಾಗುವ ಪೂರ್ವಗ್ರಹ ರಹಿತ ದೃಷ್ಟಿ ವಸ್ತುನಿಷ್ಟತೆ, ಇತಿಹಾಸ ನಿಷ್ಟತೆ, ಸರಳ ಹಾಗೂ ಪ್ರಭಾವಶಾಲಿ ನಿರೂಪಣೆ ಇವು ಈ ಕೃತಿಯ ವೈಶಿಷ್ಟ್ಯಗಳು. ಸ್ಥಾಪಿತ ಸಂಶೋಧನಾ ನಿಯಮಗಳಿಗೆ ಅತಿಯಾಗಿ ಬದ್ಧವಾಗದೆ. ಈ ಕೃತಿಯನ್ನು ರಚಿಸಿದ್ದಾಗಿ ಹೇಳಿಕೊಂಡಿದ್ದರೂ, ಒಂದು ಸಂಶೋಧನ ಪ್ರಬಂಧದ ಸರ್ವ ಲಕ್ಷಣಗಳನ್ನು ಹೊಂದಿರುವ ಈ ಪುಸ್ತಕವು, ಈ ತನಕ ಬಂದಿರುವ ಕೃತಿಗಳಿಗಿಂತ ಭಿನ್ನವಾಗಿ ನಿಲ್ಲುವ ಕೃತಿಯೆಂದು ಓದುಗನಿಗೆ ಅನಿಸುವುದು ಇದರ ವೈಶಿಷ್ಟ್ಯವೂ ಹೌದು ಸಾರ್ಥಕ್ಯವೂ ಹೌದು’ ಎಂದು ಪ್ರಶಂಸಿಸಿದ್ದಾರೆ. 

About the Author

ಅರವಿಂದ ಚೊಕ್ಕಾಡಿ
(21 December 1975)

 ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ  ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ  ಬಿ. ಇಡ್. ಪದವೀಧರರಾಗಿರುವ ಇವರು  ಕರ್ನಾಟಕ ರಾಜ್ಯ  ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...

READ MORE

Related Books