ಬುದ್ಧ ವಚನ

Author : ಎಸ್. ನಟರಾಜ ಬೂದಾಳು

₹ 110.00




Year of Publication: 2022
Published by: ಸೂಜಿಗಲ್ಲು ಪ್ರಕಾಶನ

Synopsys

ಬುದ್ಧ ವಚನ ಎಸ್. ನಟರಾಜ ಬೂದಾಳು ಅವರ ಆರ್‍ಯ ದೇವನ ನಾನ್ನೂರು ವಚನಗಳು ಕೃತಿಯಾಗಿವೆ. ಒಂದನ್ನು ಕಾಣಬಲ್ಲವನು ಎಲ್ಲವನ್ನೂ ಕಾಣಬಲ್ಲ ಆ ಒಂದರ ಶೂನ್ಯತೆಯೇ ಎಲ್ಲದರ ಶೂನ್ಯತೆಯಾಗಿದೆ. ದೀರ್ಘಕಾಲ ಬದುಕಬೇಕೆಂದು ಬಯಸುತ್ತೀಯ ಆದರೆ ವಯಸ್ಸಾಗುವುದು ಇಷ್ಟವಾಗುವುದಿಲ್ಲ. ಆಶ್ಚರ್ಯ! ನಿನ್ನ ಈ ನಡವಳಿಕೆ ನಿನ್ನಂಥವರಿಗೆಲ್ಲ ಸರಿ ಅನ್ನಿಸುತ್ತದೆ. ದೇಹಸುಖಕ್ಕೆ ಸಾರುವ ಶ್ರಮವು ಕಟ್ಟ ವೈದ್ಯವಂತೆ ಪ್ರಯೋಜನವಿಲ್ಲದು ಬಂಗಾರದ ಬಟ್ಟಲಿಗೆ ವಾಂತಿ ಮಾಡುವುದನ್ನು ಸಂಭ್ರಮವೆನ್ನಬೇಕೆ? ಒಳಗಿನ ವ್ಯಕ್ತಿತ್ವ ಗಂಡೂ ಅಲ್ಲ ಹೆಣ್ಣು ಅಲ್ಲ ನಪು೦ಸಕವೂ ಅಲ್ಲ. ಹೊರಗಿನ ನಿನ್ನನ್ನು ನೀನು ಗಂಡೆಂದುಕೊಳ್ಳುವುದು ಅಜ್ಞಾನವಲ್ಲದೆ ಮತ್ತೇನೂ ಇಲ್ಲ.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books