ಬುದ್ದನೆಂಬ ಜ್ಞಾನಪೂರ್ಣ ಜಗಂಜ್ಯೋತಿ

Author : ಎಸ್. ನಟರಾಜ ಬೂದಾಳು

Pages 26

₹ 40.00




Year of Publication: 2018
Published by: ನೆಲಸಿರಿ
Address: ಅನಿಕೇತನ, 10ನೇ ತಿರುವು, ಟಿ.ಪಿ. ಕೈಲಾಸಂ ರಸ್ತೆ, ಸಪ್ತಗಿರಿ ಬಡಾವಣೆ, ತುಮಕೂರು- 572102

Synopsys

'ಬುದ್ಧನೆಂಬ ಜ್ಞಾನಪೂರ್ಣ ಜಗಂಜ್ಯೋತಿ' ಲೇಖಕ ನಟರಾಜ ಬೂದಾಳು ಅವರ ಲೇಖನ ಸಂಕಲನ. ಬುದ್ಧನ ಸಮಾಜವಾದವನ್ನು ಎಳೆಯರಿಗೂ ಮನಮುಟ್ಟುವಂತೆ ತಲುಪಿಸಿದ್ದಾರೆ.  ಧರ್ಮಾಂಧತೆ, ಮೂಢನಂಬಿಕೆ ಮತ್ತು ಪರಾವಲಂಬನೆ ಇವೊತ್ತು ರಾಷ್ಟದ ಮೇಲೆ ಎರಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಿದೆ. ವೈಜ್ಞಾನಿಕ ದೃಷ್ಟಿಕೋನ ಮತ್ತು ಪ್ರಜಾಸತ್ತಾತ್ಮಕ ಸಮಾಜಕ್ಕೆ ಬುದ್ದ ಮಾರ್ಗವು ಹೇಗೆ ಸಹಕಾರಿಯಾಗಿದೆ ಎಂಬುದನ್ನು ಅತ್ಯಂತ ಸಷ್ಟವಾಗಿ, ಸರಳವಾಗಿ ಹೇಳಿದ್ದಾರೆ. ಈ ಕೃತಿಯ ಅಧ್ಯಯನವು ಸ್ವತಂತ್ರ ವಿಚಾರ ಶಕ್ತಿಗೆ ಹಾಗೂ ಬೌದ್ಧ ತಾತ್ತಿಕತೆಯ ಶೋಧನೆಗೆ ಉತ್ತಮ ಪ್ರವೇಶಿಕೆಯನ್ನು ಒದಗಿಸುತ್ತದೆ.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books