ಬುದ್ಧಿ ಭ್ರಮಣೆ ಮನೋವೈಜ್ಞಾನಿಕ ನೆಲೆಯಲ್ಲಿ

Author : ಕೆ.ವಿ. ತಿರುಮಲೇಶ್‌

Pages 152

₹ 100.00




Year of Publication: 2013
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

‘ಬುದ್ಧಿ ಭ್ರಮಣೆ ಮನೋವೈಜ್ಞಾನಿಕ ನೆಲೆಯಲ್ಲಿ’ ಬ್ರಿಟಿಷ್ ವೈದ್ಯ, ಮನೋವಿಜ್ಞಾನಿ ಬರ್ನಾರ್ಡ್ ಹಾರ್ಟ್ ಅವರ ಕೃತಿಯ ಕನ್ನಡಾನುವಾದ. ಭಾಷಾಶಾಸ್ತ್ರಜ್ಞ, ಲೇಖಕ ಕೆ.ವಿ. ತಿರುಮಲೇಶ್ ಅವರು ಈ ಕೃತಿಯನ್ನು ಕನ್ನಡೀಕರಿಸಿದ್ದಾರೆ.

ಬರ್ನಾರ್ಡ್ ಹಾರ್ಟ್ ಎಂಬ ಬ್ರಿಟಿಷ್ ವೈದ್ಯ, ಮನೋವಿಜ್ಞಾನಿ ಹಾಗೂ ಪ್ರಾಧ್ಯಾಪಕ 1912ರಲ್ಲಿ The Psychology of Insanity ಎಂಬ ಕಿರು ಹೊತ್ತಗೆಯೊಂದನ್ನು ಬರೆದರು; ಅದು ತುಂಬಾ ಜನಪ್ರಿಯವಾಗಿ ಮುಂದಿನ ವರ್ಷಗಳಲ್ಲಿ ಹೊಸ ಆವೃತ್ತಿಗಳನ್ನೂ ಮರುಮುದ್ರಣಗಳನ್ನೂ ಕಂಡಿತು. ಈ ಮಧ್ಯೆ ಇನ್ನೂ ಎಳವೆಯಲ್ಲಿದ್ದ ಮನೋವಿಜ್ಞಾನ ಶೀಘ್ರಗತಿಯಿಂದ ಬೆಳೆಯುತ್ತಲೇ ಇತ್ತು. 1930ರಲ್ಲಿ ಬರ್ನಾರ್ಡ್ ಹಾರ್ಟ್ ಈ ಕೃತಿಯ ನಾಲ್ಕನೆಯ ಆವೃತ್ತಿಯನ್ನು ರಚಿಸಿದರು. ಮನೋವಿಜ್ಞಾನ ಇನ್ನೂ ಬೆಳೆಯುತ್ತಲೇ ಇದೆ; ಇಂಥ ಜ್ಞಾನಶಾಖೆಗೆ ಕೊನೆಯೆಂಬುದು ಇಲ್ಲ. ಆದ್ದರಿಂದ ಯಾವ ಪುಸ್ತಕವೂ ಸಂಪೂರ್ಣ ಎನ್ನುವಂತಿಲ್ಲ. ಹಾರ್ಟ್‌ ಅವರ ಪುಸ್ತಕ ಈ ಕ್ಷೇತ್ರದಲ್ಲಿ ಒಂದು ಆರಂಭದ ಪ್ರಯತ್ನ, ಒಂದು ಅವತರಿಣಿಕೆ, ಬುದ್ಧಿಭ್ರಮಣೆ ಅರ್ಥಾತ್ ಹುಚ್ಚು ಎಂದರೆ ಏನು ಎನ್ನುವುದನ್ನು ತಮ್ಮ ಕಾಲದ ಮನೋವೈಜ್ಞಾನಿಕ ದೃಷ್ಟಿಯಿಂದ ಅವರು ಇಲ್ಲಿ  ವಿವರಿಸಿದ್ದಾರೆ. ಜೊತೆಗೆ ಬುದ್ಧಿಭ್ರಮಣೆಯ ಕುರಿತಾಗಿ ಜನಸಾಮಾನ್ಯರಿಗೆ ಇರಬಹುದಾದ ತಪ್ಪು ಗ್ರಹಿಕೆಗಳನ್ನು ನೀಗಿಸಲು ಶ್ರಮಿಸಿದ್ದಾರೆ. ಈ ಕ್ಷೇತ್ರ ಇಂದೀಗ ಆಳವಾಗಿಯೂ ಬೆಳೆದಿರಬಹುದು; ಇಂಥ ಬೆಳವಣಿಗೆಗೆ ಹಾರ್ಟ್ ಅವರಂಥವರ ಕೊಡುಗೆಯೂ ಇದೆ.

“ಬುದ್ಧಿಭ್ರಮಣೆ: ಮನೋವೈಜ್ಞಾನಿಕ ದೃಷ್ಟಿಯಲಿ' ಹೆಸರಿನಲ್ಲಿ ಇಲ್ಲಿ ಕನ್ನಡಕ್ಕೆ ಅನುವಾದಿಸಿರುವುದು The Psyce of Insanityಯ ನಾಲ್ಕನೆಯ ಆವೃತ್ತಿಯ ಪಠ್ಯವನ್ನು, ಹಾರ್ಟ್ ಅವರು ಬರೆದ ಮುನ್ನುಡಿಯನ್ನೂ ಅನುವಾದಿಸಲಾಗಿದೆ. ಈ ಪುಸ್ತಕವನ್ನು ಓದುವಾಗ ಪಾರಿಭಾಷಿಕ ಪದ ಕಾರಣ ಆರಂಭದಲ್ಲಿ ಕೆಲವರಿಗೆ ಸ್ವಲ್ಪ ತೊಡಕಾಗಬಹುದು; ಆದರೆ ಓದುತ್ತ ಹೋದಂತೆ ಈ ಪದಗಳ ಅರ್ಥ ಸ್ವಯಂವೇದ್ಯವಾಗುತ್ತದೆ.

About the Author

ಕೆ.ವಿ. ತಿರುಮಲೇಶ್‌
(12 September 1940 - 30 January 2023)

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...

READ MORE

Related Books