ಬುದ್ದಿಯ ಕಥೆಗಳು

Author : ದೇವುಡು ನರಸಿಂಹಶಾಸ್ತ್ರಿಗಳು

Pages 69

₹ 0.00




Year of Publication: 1927
Published by: ಮೈಸೂರು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ

Synopsys

ಮೈಸೂ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ದೇವುಡು ನರಸಿಂಹಶಾಸ್ತ್ರಿ ಅವರ ‘ಬುದ್ದಿಯ ಕಥೆಗಳು’ ಕೃತಿಯನ್ನು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಪಠ್ಯವಾಗಿ ರೂಪಿಸಿತ್ತು ಹಾಗೂ ಉಪಾಧ್ಯಾಯರ ಉಪಯೋಗಕ್ರಿಕೆಂದೂ ಶಿಫಾರಸು ಮಾಡಿತ್ತು. ಪ್ರಸ್ತುತ ಕೃತಿಯು ದ್ವಿತೀಯ ಮುದ್ರಣವಾಗಿದೆ. ಕಥೆಯಲ್ಲಿಯ ನೀತಿಯ ಸ್ವರೂಪವು ಮಕ್ಕಳ ಮನಸ್ಸಿನಲ್ಲಿ ಸುಲಭವಾಗಿ ಮೂಡುವಂತೆ ಪ್ರಯತ್ನಿಸಲಾಗಿದೆ. ಇಲ್ಲಿಯ ಒಟ್ಟು 14 ಕಥೆಗಳ ವಸ್ತು-ತಂದೆ-ತಾಯಿ, ಶಿಕ್ಷಕರಿಗೆ, ರಾಜರಿಗೆ ವಿಧೆಯರಾಗಿರುವುದು, ನಿಜವನ್ನೇ ನುಡಿಯುವುದು, ಶುಚಿತ್ರ ಕಾಯ್ದುಕೊಳ್ಳುವುದು, ಪ್ರಾಣಿಗಳಲ್ಲಿ ದಯೆ ತೋರುವುದು ಆಗಿದೆ. ತಿಮ್ಮ, ಬಾಳೆಯೂ ಸುಗಂಧ ರಾಜನೂ, ಗರುಡನೂ ಗೂಬೆಯೂ ಇತ್ಯಾದಿ ಕಥೆಗಳಿವೆ.

 

About the Author

ದೇವುಡು ನರಸಿಂಹಶಾಸ್ತ್ರಿಗಳು
(29 December 1886 - 27 October 1962)

’ಮಹಾಕಾದಂಬರಿಕಾರ’ ಎಂದು ಹೆಸರುವಾಸಿಯಾಗಿದ್ದ ದೇವುಡು ನರಸಿಂಹಶಾಸ್ತ್ರಿಗಳು ಶಿಕ್ಷಕರಾಗಿ, ಸಂಪಾದಕರಾಗಿ, ನಟರಾಗಿ, ವಿಮರ್ಶಕರಾಗಿ ತಮ್ಮ ಪ್ರತಿಭೆ- ಪಾಂಡಿತ್ಯ ಮೆರೆದಿದ್ದರು. ನರಸಿಂಹ ಶಾಸ್ತ್ರಿಗಳು ಜನಿಸಿದ್ದು ಮೈಸೂರಿನ ರಾಜಪುರೋಹಿತರ ಮನೆತನದಲ್ಲಿ.  1896ರ ಡಿಸೆಂಬರ್‌ 26ರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ತಾಯಿಯ ಆಸರೆಯಲ್ಲಿ ಬೆಳೆದ ನರಸಿಂಹಶಾಸ್ತ್ರಿಗಳು ತೀಕ್ಷ್ಣ ಬುದ್ಧಿಯುಳ್ಳವರಾಗಿದ್ದರು. ಹನ್ನೆರಡನೆಯ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತದಂತಹ ಕಾವ್ಯ ಮತ್ತುಭಾಗವತದಂತಹ ಪುರಾಣಗಳನ್ನು ಓದಿ ಅರಿತಿದ್ದರು. ಹದಿನೈದನೆಯ ವಯಸ್ಸಿನಲ್ಲಿಯೇ ಛಂದೋಬದ್ಧವಾಗಿ ಕಾವ್ಯ ರಚಿಸುವ ಹವ್ಯಾಸ ಬೆಳೆಸಿಕೊಂಡರು. ಸಾಂಪ್ರದಾಯಿಕ ವೈದಿಕ ವಿದ್ಯೆಯ ಜೊತೆಯಲ್ಲಿಯೇ ಬಿ.ಎ., ಎಂ.ಎ. ಪದವಿಯನ್ನು ಸಂಸ್ಕೃತ ಹಾಗೂ ಭಾರತೀಯ ತತ್ವಶಾಸ್ತ್ರದಲ್ಲಿ ಪಡೆದಿದ್ದರು. ಸರ್ವಪಲ್ಲಿ ...

READ MORE

Related Books