ಬಿಜಿನೆಸ್ ಮ್ಯಾನೇಜ್ಮೆಂಟ್ ಜನಪದ ಕತೆಗಳು

Author : ಟಿ.ಗೋವಿಂದರಾಜು

Pages 240

₹ 240.00




Year of Publication: 2020
Published by: ಪುಸ್ತಕ ಜೇನು
Address: 765, 4ನೇ ಮುಖ್ಯರಸ್ತೆ, ಕಿರ್ಲೋಸ್ಕರ್ ಲೇಔಟ್, ಹೆಸರುಘಟ್ಟ ರಸ್ತೆ, ಬೆಂಗಳೂರು- 560073

Synopsys

‘ಬಿಜಿನೆಸ್ ಮ್ಯಾನೇಜ್ಮೆಂಟ್ ಜನಪದ ಕತೆಗಳು’ ಲೇಖಕ ಡಾ. ಟಿ. ಗೋವಿಂದರಾಜು ಅವರು ಸಂಗ್ರಹಿಸಿರುವ ಜನಪದ ಕತೆಗಳ ಸಂಕಲನ. ಮೂಲತಃ ಬೆಂಗಳೂರು ಗ್ರಾಮಾಂತರಕ್ಕೆ ಸೇರಿದ ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿಯ ಚನ್ನಾದೇವಿ ಅಗ್ರಹಾರದವರು. ತಮ್ಮ ಊರಿನವರಿಂದ ಕತೆಗಳನ್ನು ಸಂಗ್ರಹಿಸಿದ್ದು, ಕೆಲವು ಕತೆಗಳು ವಡ್ಡಾರಾಧನೆಯಷ್ಟು ಪ್ರಾಚೀನವಾದವು ಎನ್ನುತ್ತಾರೆ ಲೇಖಕರು.

ಇಲ್ಲಿ ಸೇರಿರುವ ಮುತ್ತಿನತೆನೆ ಕತೆಯಲ್ಲಿ ಅದ್ಭುತವಾಗಿ ನಿರೂಪಿತವಾಗಿರುವ ಕಳ್ಳನನ್ನು ಹಿಡಿಯ ಹೋದ ತಳವಾರನನ್ನೇ ಲಾಕಪ್ಪಿನಲ್ಲಿ ಸಿಕ್ಕಿಸುವ ಪರಿಕಲ್ಪನೆ ವಡ್ಡಾರಾಧನೆಯ ವಿಧ್ಯುತ್ಚೋರನೆಂಬ ರಿಸಿಯಕತೆಯಲ್ಲೇ ದಾಖಲಾಗಿದೆ. ಜನ್ನನ ಯಶೋಧರ ಚರಿತೆಯ ಅಮೃತಮತಿ ಮತ್ತು ಕುಷ್ಟರೋಗಿಯು ಇಲ್ಲಿನ ಕತೆಯ ಕತೆಯಲ್ಲಿ ಜೀವಪಡೆದಿದ್ದಾರೆ. ಹಾಗೆಯೇ, ಜೈನ ಪುರಾಣ, ಬೌದ್ಧ ಸಾಹಿತ್ಯ, ಬೇತಾಳ ಪಂಚವಿಂಶತಿ, ದೇವಚಂದ್ರನ ರಾಜಾವಳಿ ಕತೆ ಮೊದಲಾದವು ನಮ್ಮ ಗ್ರಾಮೀಣರು ಮೌಖಿಕ ನಿರೂಪಣೆಗಳಲ್ಲಿ ಈಗಲೂ ಕಾಪಿಟ್ಟುಕೊಂಡು ಬಂದಿರುವ ಕಥಾ ಎಳೆಗಳು ಲಭ್ಯವಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಟಿ.ಗೋವಿಂದರಾಜು

ಡಾ. ಟಿ. ಗೋವಿಂದರಾಜು ಕವಿಯಾಗಿ, ಪ್ರಬಂಧಕಾರರಾಗಿ, ಕತೆಗಾರರಾಗಿ ಪರಿಚಿತರು. ಇವರು ಹುಟ್ಟಿದ್ದು 15.01.1953 ದೊಡ್ಡಬಳ್ಳಾಪುರ ತಾ. ಚನ್ನಾದೇವಿ ಅಗ್ರಹಾರದಲ್ಲಿ. ಇವರ ತಂದೆ  ದೊಡ್ಡೇರಿ ತಿಮ್ಮರಾಯಪ್ಪ, ತಾಯಿ  ಹೊನ್ನಮ್ಮ. ಕೃಷಿಕ ಮನೆತನದವರು. ಹೊನ್ನಮ್ಮ ಅವರು ತಮ್ಮ ಅಪಾರ ದೇಸೀ ಜ್ಞಾನ ವಿಶೇಷದ ಅಭಿವ್ಯಕ್ತಿಗಾಗಿ ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದವರು. ಬೆಂಗಳೂರು ವಿಶ್ವಿ ವಿದ್ಯಾಲಯದಿಂದ  ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಹಾಗೂ ಜಾನಪದ ಅಧ್ಯಯನದಲ್ಲಿ ಪಿಎಚ್.ಡಿ. ಪಡೆದ ಟಿ. ಗೋವಿಂದರಾಜು,  ಪ್ರಾರಂಭಕ್ಕೆ ಸಿನಿಮಾ ಕ್ಷೇತ್ರ, ಎಚ್. ಎಲ್. ನಾಗೇಗೌಡರೊಂದಿಗೆ ಜಾನಪದ ಟ್ರಸ್ಟ್ ಕಾರ್ಯದರ್ಶಿಯಾಗಿ, ಜಾನಪದ ಜಗತ್ತು  ಪತ್ರಿಕಾ ಸಂಪಾದಕನಾಗಿ ದುಡಿದ ಹಿರಿಮೆ ಹೊಂದಿದ್ದಾರೆ. ಸರ್ಕಾರದ ವಿವಿಧ ...

READ MORE

Related Books