ಚಂದಮಾಮ

Author : ಸಂತೋಷ್ ಬಿದರಗಡ್ಡೆ

Pages 64

₹ 99.00




Year of Publication: 2020
Published by: ವೇದಾಂತ ಪ್ರಕಾಶನ
Address: ಶಿವಮೊಗ್ಗ

Synopsys

"ಚಂದಮಾಮ" ಸಂತೋಷ್ ಬಿದರಗಡ್ಡೆ ಅವರ ಕೃತಿಯಾಗಿದೆ. ಯುವ ಮನಸುಗಳಿಗೆ ಸದಾ ಸ್ಫೂರ್ತಿಯಾಗಿ ಅವರ ಹೃದಯದ ಕಣ್ಣು ಕವಿತೆಗಳಾಗಿ ಅಭಿವ್ಯಕ್ತಿ ಹೊಂದಿ, ಕಣ್ಣಿಗೆ ಕಾಣದ್ದನ್ನು ಕಿವಿಗೆ ಕೇಳದ್ದನ್ನು ಅವರ ಹೃದಯದ ಮಿಡಿತದ ಕವಿತೆಯ ಪದಗಳಾಗಿ ಮನದ ಕಲ್ಪನೆಯಾಗಿ ಹೃದಯ ತಟ್ಟಿದೆ. ಭಾವನೆಗಳ ಲಿಪಿಯು ಅನನ್ಯವಾಗಿ ಶಬ್ದಗಳ ಸಮ್ಮಿಲನದ ತೇರನ್ನು ಎಳೆದು ತಂದಿವೆ. ಯಾಂತ್ರಿಕ ಯುಗದಲ್ಲೂ ಚಿಂತನೆ, ಭಾವನೆ ಹಸಿರಾಗಿವೆ. ಪ್ರಕೃತಿ, ನೆಲಜಲ, ನಾಡುನುಡಿ, ತಾಯಿ ವಾತ್ಸಲ್ಯ, ಯಶೋಗಾದರು. ಪ್ರೀತಿ ಪ್ರೇಮಗಳೊಂದಿಗೆ ಪ್ರಸ್ತುತವಾದ ಹಲವು ಹತ್ತು ವಿಚಾರಗಳಿವೆ. ಈ ಎಲ್ಲವನ್ನು ತಮ್ಮ ಏಳನೇ ಕೃತಿ “ಚಂದಮಾಮ" ಕವನ ಸಂಕಲನದಲ್ಲ ಸೆರೆ ಹಿಡಿದಿರುವ ಸಂತೋಷ್ ಅದರಗಡ್ಡೆ ಯವರು ಈಗಾಗಲೇ ಸಾಹಿತ್ಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಸಾಹಿತ್ಯ ಸಂಘಟನಾ ಚತುರ ಸ್ನೇಹಜೀವಿಯಾಗಿದ್ದಾರೆ. ಯು.ಎನ್. ಸಂಗನಾಳಮಠ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸಂತೋಷ್ ಬಿದರಗಡ್ಡೆ
(20 May 1987)

ಸಂತೋಷ್ ಬಿದರಗಡ್ಡೆ ಪ್ರಸ್ತುತ ಐತಿಹಾಸಿಕ ತಾರಕೇಶ್ವರನ ನಾಡು, ಕುಮಾರೇಶ್ವರ ಮಹಾಸ್ವಾಮಿಗಳ ಭೂಮಿ ಹಾನಗಲ್ಲ ತಾಲೂಕಿನ ಪಂ.ಪುಟ್ಟರಾಜ ಗವಾಯಿಗಳ ಜನ್ಮಸ್ಥಳ ದೇವರ ಹೊಸಪೇಟೆಯಲ್ಲಿ  ಶಿಕ್ಷಕ ಸೇವೆಯಲ್ಲಿರುತ್ತಾರೆ.  ಪ್ರವೃತ್ತಿಯಲ್ಲಿ ಕತೆ, ಕವಿತೆ, ಲೇಖನ ಬರೆಯುವ ಯುವ ಸಾಹಿತಿಯಾಗಿದ್ದಾರೆ. ಅವರು ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಗಡ್ಡೆ  ಗ್ರಾಮದಲ್ಲಿ 1987, ಮೇ 20 ರಂದು ಜನಿಸಿದರು. ತಂದೆ ಪರಮೇಶ್ವರಪ್ಪಗೌಡ್ರು   ತಾಯಿ ಬಿ ಹೆಚ್ ದಾಕ್ಷಾಯಿಣಮ್ಮ 2005ನೇ ಇಸವಿಯಲ್ಲಿ ಚಾಲುಕ್ಯರ ರಾಜಧಾನಿ ಬಾದಾಮಿ ತಾಲೂಕಿನಲ್ಲಿ ಶಿಕ್ಷಕವೃತ್ತಿ ಪ್ರಾರಂಭಿಸಿದ ಇವರು  ಹಾನಗಲ್ಲ ತಾಲೂಕಿನಲ್ಲಿ ಸೇವೆಗೈಯುತ್ತಿದ್ದಾರೆ. "ಬಿದರಗಡ್ಡೆ ಮಲ್ಲಿಕಾರ್ಜುನ" ಕಾವ್ಯನಾಮದಲ್ಲಿ ಆಧುನಿಕ ವಚನಗಳನ್ನು, ಸಾವಿರಾರು ಕವಿತೆಗಳನ್ನು ಬರೆದಿರುತ್ತಾರೆ. ಇವರ ...

READ MORE

Related Books