ಚಂದ್ರಶೇಖರ ಕಂಬಾರ ಸಮಗ್ರ ಕಾವ್ಯ

Author : ಚಂದ್ರಶೇಖರ ಕಂಬಾರ

Pages 350

₹ 350.00




Year of Publication: 2018
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಸಮಗ್ರ ಕವಿತೆಗಳನ್ನು ಸಂಕಲಿಸಿದ ಕೃತಿ-ಸಮಗ್ರ ಕಾವ್ಯ. ಚಂದ್ರಶೇಖರ ಕಂಬಾರರು ಮೂಲತಃ ನಾಟಕಕಾರರು. ಆದರೆ, ಕಥೆ, ಕಾದಂಬರಿ ಹಾಗೂ ಕವಿತೆಗಳನ್ನು ಸಹ ರಚಿಸಿದ್ದಾರೆ. ಚಲನಚಿತ್ರಗಳಿಗೆ ಗೀತೆಗಳನ್ನು ಬರೆದಿದ್ದಾರೆ. ರಂಗಗೀತೆಗಳೂ ಸಹ ಇವರ ಬಹುಮುಖ ವ್ಯಕ್ತಿತ್ವದ ಪ್ರತೀಕವಾಗಿವೆ. ಈ ಎಲ್ಲ ಪ್ರಕಾರ ಸಾಹಿತ್ಯದ ವಸ್ತು ಎಂಬಂತೆ ಇವರ ಕವಿತೆಗಳಿದ್ದು, ವಸ್ತು ವೈವಿಧ್ಯತೆಯನ್ನು ಒಳಗೊಂಡಿವೆ. ‘ಮುಗುಳು'(1958), ‘ಹೇಳತೇನ ಕೇಳ'(1964), ‘ತಕರಾರಿನವರು'(1971), ಸಾವಿರದ ನೆರಳು-1979, ಆಯ್ದ ಕವನಗಳು-1989, ಬೆಳ್ಳಿ ಮೀನು-1989, ಅಕ್ಕಕ್ಕು ಹಾಡುಗಳೆ-1993, ಈವರೆಗಿನ ಹೇಳತೇನ ಕೇಳ-1993 ಹೀಗೆ ಕಾಲಕಾಲಕ್ಕೆ ಅವರು ಬರೆದ ಎಲ್ಲ 8 ಕವನ ಸಂಕಲನಗಳ ಒಟ್ಟು ಮೊತ್ತವಾಗಿ ‘ಸಮಗ್ರ ಕಾವ್ಯ’ ಒಡಮೂಡಿದೆ. ‘ಚಕೋರಿ’ ಎಂಬುದು ಅವರು ಬರೆದ ಮಹಾಕಾವ್ಯವಾಗಿದೆ.

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books