ಚನ್ನಬಸವಣ್ಣ

Author : ವಿಜಯಶ್ರೀ ಸಬರದ

Pages 58

₹ 20.00




Year of Publication: 2001
Published by: ಕಲ್ಯಾಣ ನಾಡಿನ ಶರಣ ಪರಿಷತ್
Address: ಬಸವಕಲ್ಯಾಣ

Synopsys

‘ಚನ್ನಬಸವಣ್ಣ’ ಲೇಖಕಿ ಡಾ. ವಿಜಯಶ್ರೀ ಸಬರದ ಅವರು ರಚಿಸಿರುವ ಚನ್ನಬಸವಣ್ಣ ಅವರ ಜೀವನ ಚರಿತ್ರೆ. ಈ ಕೃತಿಗೆ ಎ.ಕೆ. ರಾಮೇಶ್ವರ ಅವರ ಬೆನ್ನುಡಿ ಬರಹವಿದೆ. ಕಾವ್ಯ, ವಿಮರ್ಶೆ, ಪ್ರಬಂಧಗಳ ಮೂಲಕ ಕನ್ನಡ ಸಾರಸ್ವತ ಪ್ರಪಂಚಕ್ಕೆ ಚಿರಪರಿಚಿತರಾಗಿದ್ದಾರೆ. ಡಾ. ವಿಜಯಶ್ರೀ ಸಬರದ ಅವರು. ಇತ್ತೀಚೆಗೆ ಪ್ರಕಟವಾದ ಅವರ ವಚನ ವಾಹಿನಿ ಪ್ರಬಂಧ ಸಂಕಲನ ವಚನ ಸಾಹಿತ್ಯದಲ್ಲಿ ಒಂದು ಮೈಲುಗಲ್ಲಾಗಿದೆ. ವಚನಕಾರರ ವೈಚಾರಿಕ ನಿಲುವಿಗೆ ಹಿಡಿದ ಕನ್ನಡಿಯಾಗಿದೆ. ಈ ಕೃತಿ. ಜ್ವಲಂತ, ಲಕ್ಷ್ಮಣರೇಖೆದಾಟಿದವರು ಇವರ ಕವನ ಸಂಕಲನಗಳು ಸಾಹಿತ್ಯ ಮತ್ತು ಮಹಿಳೆ ವೈಚಾರಿಕ ಪುಸ್ತಕ, ಶರಣರ ದೃಷ್ಟಿಯಲ್ಲಿ ಬಸವಣ್ಣ ಪ್ರಚಾರೋಪನ್ಯಾಸ ಕೃತಿ ಗಮನಾರ್ಹಾವಾಗಿವೆ. ಈ ಸದ್ಯ ಕಲ್ಯಾಣನಾಡಿನ ಶರಣ ಪರಿಷತ್ತು ಬೆಳ್ಳಿ ಹಬ್ಬದ ಮಕ್ಕಳು ಮುತ್ತು ಮಾಲೆಯಲ್ಲಿ ಚನ್ನಬಸವಣ್ಣ ಕೃತಿ ಪ್ರಕಟವಾಗಿ ಹೊರಬರುತ್ತಲಿದೆ. ಈ ಪುಸ್ತಕ ಕನ್ನಡದ ಚಿಣ್ಣರು, ನವಸಾಕ್ಷರರು ಓದಿ ಆನಂದಿಸುತ್ತಾರೆಂದು ಆಶಿಸಿದ್ದೇನೆ ಎಂದಿದ್ದಾರೆ ಎ.ಕೆ.ರಾಮೇಶ್ವರ.

About the Author

ವಿಜಯಶ್ರೀ ಸಬರದ
(01 February 1957)

ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸುವ ಲೇಖಕಿ ವಿಜಯಶ್ರೀ ಸಬರದ. ಅವರು ಜನಿಸಿದ್ದು 1957ರ ಫೆಬ್ರುವಿರ 1ರಂದು. ತಂದೆ ಗುಣವಂತರಾವ ಪಾಟೀಲ. ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್‌ನಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ ಪಡೆದರು. ಬೀದರ್‌ನ ಅಕ್ಕ ಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ...

READ MORE

Related Books