ಚೆಕಾವ್ ಟು ಶಾಂಪೇನ್

Author : ಹೇಮಾ ಪಟ್ಟಣಶೆಟ್ಟಿ

Pages 100

₹ 90.00




Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

ಪಾವ್ಲೋವಿಚ್ ಚೆಕಾವ್ ರಷ್ಯಾದ ಪ್ರಮುಖ ನಾಟಕಕಾರ, ಕಥೆಗಾರ ಹಾಗೂ ಚಿಂತಕ. ಅವರ ನಾಲ್ಕು ನಾಟಕಗಳು, ರೇಮಂಡ್ ಕಾರ್ವರ್‌ ನ ಕಥೆಯೊಂದನ್ನು ಕೇಂದ್ರವಾಗಿಟ್ಟುಕೊಂಡು ಹೇಮಾ ಪಟ್ಟಣಶೆಟ್ಟಿ ಕೃತಿ ರಚಿಸಿದ್ದಾರೆ. ಹಾಸ್ಯ, ಲವಲವಿಕೆಯಿಂದ ಕೃತಿ ಆರಂಭ ಪಡೆದರೂ ಸಹ ಅನ್ಯಾಯ, ಜಿಗುಪ್ಸೆಯನ್ನು ತೀಕ್ಷ್ಣ ವಾಗಿ  ವಿವೇಚಿಸುತ್ತದೆ. ಸದೃಢ ದೇಶ  ದೇಶ ಕಟ್ಟಲು ದುಡಿಮೆ ಮತ್ತು ಸಂಸ್ಕೃತಿ ಒಂದಾಗಬೇಕು ಎಂದು ಅಭಿಪ್ರಾಯ ಪಟ್ಟ ಪಾವ್ಲೋವಿಚ್ ಚೆಕಾವ್ ಅವರ ಬದುಕಿನ ವೈವಿಧ್ಯತೆ  ನಾಟಕದಲ್ಲಿದೆ.

About the Author

ಹೇಮಾ ಪಟ್ಟಣಶೆಟ್ಟಿ
(10 February 1954)

  ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ.  ಅನನ್ಯ ಪ್ರಕಾಶನ ಸ್ಥಾಪಿಸಿ 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books