ಚಿದಂಬರರು

Author : ತ.ಸು. ಶಾಮರಾಯ

Pages 102

₹ 15.00




Year of Publication: 1976
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಚಿದಂಬರರು' ಜೀವನಚರಿತ್ರೆಯ ಪುಸ್ತಕವಿದು. ಲೇಖಕ ತ.ಸು. ಶಾಮರಾಯರು ರಚಿಸಿದ್ದಾರೆ. ಅಂಚೆ ಇಲಾಖೆಯ ಗುಮಾಸ್ತ ವೆಂಕಟರಾಮಯ್ಯನಿಗೆ ದೇವರನ್ನು ಕಾಣುವ ಹಂಬಲ. ಸದ್ಗುರು ದೊರೆತರು, ವೆಂಕಟರಾಮಯ್ಯ ಚಿದಂಬರ ಸ್ವಾಮಿಜಿ ಆದರು. ಚಿದಂಬರಾಶ್ರಮ ಮನಸ್ಸಿನ ಶಾಂತಿ ಬಯಸುವವರಿಗೆ ಯಾತ್ರಾ ಸ್ಥಳವಾಯಿತು. ಚಿದಂಬರರು ಕಳ್ಳಕಾಕರನ್ನು ಸನ್ಮಾರ್ಗಕ್ಕೆ ತಂದರು. ದಿಕ್ಕಿಲ್ಲದ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಬಾಳಲು ಆಶ್ರಮ ಸ್ಥಾಪಿಸಿದರು. ವಿದ್ಯಾರ್ಥಿಗಳಿಗೆ ಶಾಲೆ ಸ್ಥಾಪಿಸಿದರು. ನಿಷ್ಕಾಮ ಕರ್ಮಯೋಗ ಪುಸ್ತಕ ಬರೆದು ಭಗವದ್ಗೀತೆಯ ಸಾರವನ್ನು ಸುಲಭ ಕನ್ನಡದಲ್ಲಿ ಓದುಗರಿಗೆ ತಂದುಕೊಟ್ಟರು ಎಂದು ಚಿದಂಬರರ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ತ.ಸು. ಶಾಮರಾಯ
(12 June 1906 - 21 August 1998)

ತ.ಸು.ಶಾಮರಾಯರು ಕನ್ನಡದ ಪ್ರಮುಖ ಸಾಹಿತಿಗಳು ಮತ್ತು ವಿದ್ವಾಂಸರು. ಇವರು (12-06-1906) ಜನಿಸಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣ ಮತ್ತು ತಾಯಿ ಲಕ್ಷ್ಮಿದೇವಮ್ಮ. ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಕಾಲೇಜ್ ಅಧ್ಯಾಪಕರಾದರು. ಕುವೆಂಪು ಮಾರ್ಗದರ್ಶನದಲ್ಲಿ , 'ಕನ್ನಡ ನಾಟಕ ಎಂಬ ಪ್ರಬಂಧ ಮಂಡಿಸಿ ಎಂ.ಎ. ಪದವಿ ಪಡೆದು, ಪ್ರಾಧ್ಯಾಪಕ ವೃತ್ತಿ ಕೈಗೊಂಡರು. ಮೈಸೂರು ವಿ.ವಿ. ಪ್ರಸಾರಾಂಗದ ನಿರ್ದೇಶಕ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವ್ಯಾಕರಣ ಕೋಶಕ್ಕೆ ಸಂಬಂಧಿಸಿದ ಐದು ಕೃತಿಗಳು, ಕನ್ನಡ ನಾಟಕ, ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ, ವಿಮರ್ಶಾ ಗ್ರಂಥಗಳು, ಅಜಿತ ಪುರಾಣ ಸಂಗ್ರಹ, ಅರಣ್ಯ ಪುರಾಣ ಸಂಗ್ರಹ ( ಇದೇ ರೀತಿ 11 ಕಾವ್ಯ ಸಂಗ್ರಹಗಳು), ಮಂಕನ ಮಡದಿ ...

READ MORE

Related Books