ಚಿದಾನಂದಾವಧೂತ ಚಾರಿತ್ರ

Author : ಎಫ್.ಟಿ.ಹಳ್ಳಿಕೇರಿ

Pages 172

₹ 100.00




Year of Publication: 2006
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹಿರಿಯಹಟ್ಟಿಯವನಾದ ಅಯ್ಯಪ್ಪ ಕವಿ ತನ್ನ ಗುರುವಾಗಿದ್ದ ಮತ್ತು ಈ ಪ್ರದೇಶದ ಬಹಳ ಪ್ರಸಿದ್ಧ ಅವಧೂತ ಆಗಿದ್ದ ಚಿದಾನಂದಾವ ಧೂತರನ್ನು ಕುರಿತು ರಚಿಸಿದ ಕಾವ್ಯ ಇದಾಗಿದೆ. ಈ ಕೃತಿಯ ಕರ್ತೃ ಅಯ್ಯಪ್ಪಕವಿ ಚಿದಾನಂದಾವ ಧೂತನ ಶಿಷ್ಯ ಮತ್ತು ಅವರ ಪರಿಸರದಲ್ಲಿಯೇ ಹುಟ್ಟಿ ಬೆಳೆದವನಾಗಿದ್ದು ಹೀಗಾಗಿಯೇ ಹೆಚ್ಚುಅಧಿಕೃತವಾಗಿ ಚಿದಾನಂದಾವಧೂತರ ಬಾಲ್ಯ, ಕ್ಷೇತ್ರಸಂಚಾರ, ಸದ್ಗುರು ಕಟಾಕ್ಷ, ಹಠಯೋಗ, ರಾಜಯೋಗ ಹಾಗೂ ಕಾಶೀ ಯಾತ್ರೆಗಳನ್ನು ಇಲ್ಲಿ ಚಿತ್ರಿಸಲಾಗಿದೆ. ವೇದಾಂತ ವಿಷಯಗಳನ್ನೊಳಗೊಂಡ ಕೃತಿ ರಚನೆ ಮಾಡಿದ್ದು ಚಿದಾನಂದಾವಧೂತರ ಜೀವನ ಚರಿತ್ರೆಯ ಹಿಂದೆ ಅನುಭವ ಮತ್ತು ಅನುಭಾವಗಳು ಸಮಪ್ರಮಾಣದಲ್ಲಿ ಬೆರೆತುಕೊಂಡಿವೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅವಧೂತ ಪರಂಪರೆಯ ದೃಷ್ಟಿಯಿಂದ ಚಿದಾನಂದಾವಧೂತರ ಚಾರಿತ್ರ' ಕೃತಿಗೆ ಸಾಂಸ್ಕೃತಿಕ ಮಹತ್ವವಿದೆ. ಈ ಸಂಪುಟದಲ್ಲಿರುವ ಅಧ್ಯಾಯಗಳೆಂದರೆ: ಬಾಲ್ಯ ವಿವರ , ಕ್ಷೇತ್ರ ಸಂಚಾರ , ಸದ್ಗುರು ಕಟಾಕ್ಷ ,ಹಠಯೋಗ , ರಾಜಯೋಗ , ಕಾಶಿಯಾತ್ರೆ , ಅವಧೂತ ಚಾರಿತ್ರ 2

About the Author

ಎಫ್.ಟಿ.ಹಳ್ಳಿಕೇರಿ
(01 June 1966)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ್ರಪ್ರತಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕ ಮತ್ತು ಮುಖ್ಯಸ್ಥರು. ಎಂ.ಎ, ಎಂಫಿಲ್ ಪಿಎಚ್‌.ಡಿ ಪದವಿ ಪಡೆದಿರುವ ಅವರಿಗೆ ಹಸ್ತಪ್ರತಿ-ಗ್ರಂಥಸಂಪಾದನೆ, ಹಾಲುಮತ ಸಂಸ್ಕ್ರತಿ, ಹಳೆಗನ್ನಡ-ನಡುಗನ್ನಡ -ನಡುಗನ್ನಡ ಸಾಹಿತ್ಯ, ಯೋಗವಿಜ್ಞಾನ ಆಸಕ್ತಿಯ  ಅಧ್ಯಯನದ ಕ್ಷೇತ್ರಗಳು. ’ಕೆರೆಯ ಪದ್ಮರಸ ಮತ್ತು ಆತನ ವಂಶಜರು , ಕಂಠಪತ್ರ (1,2,3), ಹಾಲುಪತ್ರ’ ಪ್ರಕಟಿತ ಕೃತಿಗಳು. ಹಾಲುಮಠ ಅಧ್ಯಯನ ಪೀಠದ ಸಂಚಾಲಕ, ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ  ಮುಖ್ಯಸ್ಥರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾನಿಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುನ್ನತ ಸಂಶೋಧನಾ ಗ್ರಂಥ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು ಇವರಿಗೆ ...

READ MORE

Related Books