ಚಿನ್ನುಡಿ- ಭಾಷಣ, ಲೇಖನ ಇತ್ಯಾದಿ

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 124

₹ 100.00




Year of Publication: 2015
Published by: ಸಂಸ್ಕೃತಿ ಪ್ರಕಾಶನ
Address: 58 ಎಫ್, ಆದರ್ಶ ಕಾಲೋನಿ, ಕಂಟೋನ್ಮೆಂಟ್, ಬಳ್ಳಾರಿ- 583104
Phone: 9448323400

Synopsys

‘ಚಿನ್ನುಡಿ’-ಭಾಷಣ, ಲೇಖನ ಇತ್ಯಾದಿ’ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕೃತಿ. ಈ ಕೃತಿಗೆ ಪ್ರೊ.ಬಸವರಾಜ ಕಲ್ಗುಡಿ ಅವರ ಬೆನ್ನುಡಿ ಬರಹವಿದೆ. ‘ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಚಿಂತನೆಯ ಕೇಂದ್ರದಲ್ಲಿ ಕನ್ನಡ ಸಮುದಾಯದ ಸಂಸ್ಕೃತಿಯು ತಳೆಯಬೇಕಾದ ಸಮ ಸಮುದಾಯದ ಆಶಯಗಳ ತುಡಿತವು ಪ್ರಧಾನವಾಗಿ ಎದ್ದು ಕಾಣುತ್ತದೆ. ಜಾತಿಯಿಂದ ಉಂಟಾಗಿರುವ ಶ್ರೇಣೀಕರಣ, ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳಿಗೆ ಕಾರಣವಾಗಿರುವ ಈ ಅನಾರೋಗ್ಯಕರ ಸ್ಥಿತಿಯನ್ನು ಚಿನ್ನಸ್ವಾಮಿಯವರ ಮಾತುಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಅಂಬೇಡ್ಕರ್ ಚಿಂತನೆ, ಲೋಹಿಯಾವಾದಿ. ಪರಿಕಲ್ಪನೆ ಹಾಗೂ ವಚನ ಚಳುವಳಿಯು ರೂಪಿಸಿದ ಸಾಮಾಜಿಕ, ಆರ್ಥಿಕ ತಾತ್ವಿಕತೆಗಳು, ಚಿನ್ನಸ್ವಾಮಿಯವರ ಚಿಂತನೆಯಲ್ಲಿ ಒಂದಕ್ಕೊಂದು ಪರಿಣಾಮಕಾರಿಯಾದ ಸಾಂಗತ್ಯವನ್ನು, ಹೊಸ ಒಳನೋಟಗಳನ್ನು ರೂಪಿಸಿವೆ’ ಎಂದಿದ್ದಾರೆ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books