ಚಿಂತನ ಬಂಧ

Author : ಆಶಾ ಶಿವಾನಂದ ಯಮಕನಮರಡಿ

Pages 108

₹ 95.00




Year of Publication: 2013
Published by: ಆದಿತ್ಯ ಪಬ್ಲಿಕೇಷನ್ಸ್ 
Address: ಎಲ್ ಐ ಜಿ-49, ಮಹಾಂತೇಶನಗರ, ಬೆಳಗಾವಿ 

Synopsys

ಲೇಖಕಿ ಆಶಾ ಶಿವಾನಂದ ಯಮಕನಮರಡಿ ಅವರ ಅಂಕಣ ಬರೆಹಗಳ ಕೃತಿ-ಚಿಂತನ ಬಂಧ. ಒಟ್ಟು 25 ಬರೆಹಗಳನ್ನು ಸಂಕಲಿಸಲಾಗಿದೆ. ಬೆಳಗಾವಿಯ ಹಸಿರು ಕ್ರಾಂತಿ ದಿನಪತ್ರಿಕೆ ಸೇರಿದಂತೆ ವಿವಿಧ ಸ್ಥಳೀಯ ಪತ್ರಿಕೆಗಳಲ್ಲಿ ಬರೆದ ಅಂಕಣ ಬರೆಹದ ಸಂಗ್ರಹ ಕೃತಿ ಇದು. ಸಾಮಾಜಿಕ ವಿದ್ಯಮಾನಗಳು, ಈ ಬರೆಹಗಳ ಪ್ರಮುಖ ವಸ್ತುಗಳಿದ್ದು, ವಿಚಾರದ ಪ್ರಖರತೆ, ನಿರೂಪಣೆ ಶೈಲಿಯಿಂದ ಓದುಗರನ್ನು ಸೆಳೆಯುತ್ತವೆ. ಸಾಹಿತಿ ಜಲತ್ ಕುಮಾರ ಪುನಚಗೌಡ ಅವರು ಮುನ್ನುಡಿ ಬರೆದು ‘ಅಂಕಣ ಬರೆಹಗಳ ವೈಚಾರಿಕ ಪ್ರಜ್ಞೆ, ಪ್ರಬುದ್ಧ ನಿರೂಪಣಾ ಶೈಲಿ, ವಿಷಯಗಳ ಆಯ್ಕೆಯಲ್ಲಿಯ ಜಾಣ್ಮೆಯನ್ನು’ ಪ್ರಶಂಸಿಸಿದ್ದಾರೆ.  

About the Author

ಆಶಾ ಶಿವಾನಂದ ಯಮಕನಮರಡಿ

ಆಶಾ ಶಿವಾನಂದ ಯಮಕನಮರಡಿ ಅವರು ಮೂಲತಃ ಬೆಳಗಾವಿಯವರು. ರಾಜ್ಯಶಾಸ್ತ್ರ ಪದವೀಧರೆ. ಭಾವಬಂಧ, ಬೆಡಗಿನ ನವಿಲುಗರಿ (ಕವನ ಸಂಕಲನಗಳು), ಚಿಂತನಬಂಧ (ಅಂಕಣ ಬರೆಹ), ಬೆಳಗಾವಿ ಜಿಲ್ಲೆಯ ಸಾಧಿಕಿಯರ ಪರಿಚಯ-‘ಬೆಳಗಾಗಿ ಜಿಲ್ಲಾ ವಿಶಿಷ್ಟ ಸಾಧಕಿಯರು’ಕೃತಿ ಪ್ರಕಟಗೊಂಡಿದೆ. ಕಿತ್ತೂರು ರಾಣಿ ಚೆನ್ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿ ವೇದಿಕೆ, ಬೆಳಗಾವಿ, ಅಧ್ಯಕ್ಷತೆವಹಿಸಿದ್ದು, ಬೆಳಗಾವಿ ಜಿಲ್ಲಾ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಹಾಗೂ ಸಮಾಜ ಸೇವಾ ಸಂಸ್ಥೆಗಳ ಸದಸ್ಯತ್ವ ಹೊಂದಿದ್ದಾರೆ. ಉದಯ ಟಿ.ವಿ.ಯ ‘ಸಿರಿ’ಯಲ್ಲಿ ಊಲನ್ ಹೆಣಿಕೆ ಕುರಿತು ಕಾರ್ಯಕ್ರಮ, ಬೆಳಗಾವಿ ಆಕಾಶವಾಣಿಯಲ್ಲಿ ವೇಣುಧ್ವನಿಯಲ್ಲಿ ಹಲವು ...

READ MORE

Related Books