ಚೌಕಟ್ಟಿನಾಚೆ...

Author : ಚಿದಾನಂದ ಸಾಲಿ

Pages 56

₹ 250.00




Year of Publication: 2009
Published by: ಋತು ಪ್ರಕಾಶನ
Address: 7-5-148/4, ಜವಹರನಗರ ರಾಯಚೂರು - 584103
Phone: 9886891883

Synopsys

ಕರ್ನಾಟಕದ ಪ್ರಸಿದ್ಧ ಕಲಾವಿದರಲ್ಲಿ ಒಬ್ಬರಾದ ಡಾ. ಶಂಕರಗೌಡ ಬೆಟ್ಟದೂರು ಸಾಂಪ್ರದಾಯಿಕ ಚಿತ್ರಕಲೆಗೆ ಬಂಗಾಳಿ ಕಲೆಯನ್ನು ಸಂಮಿಶ್ರಣ ಮಾಡಿ ವಿನೂತನ ಶೈಲಿಯನ್ನು ಪರಿಚಯಿಸಿದವರು. ಕರ್ನಾಟಕದಲ್ಲಿ ಚಿತ್ರಕಲಾ ಮಂಟಪ ಸ್ಥಾಪಿಸಿದವರು. ಇಂತಹ ಕಲಾ ಪ್ರತಿಭೆಯನ್ನು ಗೌರವಿಸಿ, ಪರಿಚಯಿಸುವ ನಿಟ್ಟಿನಲ್ಲಿ ಕನ್ನಡದ ಲೇಖಕ ಚಿದಾನಂದ ಸಾಲಿಯವರು ’ಚೌಕಟ್ಟಿನಾಚೆ...’ಎನ್ನುವ ಶಂಕರಗೌಡರ ಕಲಾಕೃತಿಗಳ ಅಕ್ಷರನೋಟವನ್ನು ಪ್ರಕಟಿಸಿ‌ದ್ಧಾರೆ. ಶಂಕರಗೌಡರ ಕಲಾ ಶೈಲಿ, ರಚನಾ ವಿನ್ಯಾಸ, ಕಲಾಭಿರುಚಿಯ ವಿವಿಧ ಆಯಾಮ, ಅವರ ವ್ಯಕ್ತಿತ್ವ ನೋಟಗಳೆಲ್ಲವನ್ನೂ ಈ ಪುಸ್ತಕದಲ್ಲಿ ಮಾಹಿತಿಪೂರ್ಣವಾಗಿಯೂ ಮತ್ತು ಅಷ್ಟೇ ಸೃಜನಾತ್ಮಕವಾಗಿಯೂ ಕಟ್ಟಿಕೊಟ್ಟವರು ಚಿದಾನಂದ ಸಾಲಿ. ಕಲಾವಿದನ ಬದುಕಿನ ಒಳನೋಟಗಳನ್ನು, ಮತ್ತು ಅವನ ಕಲಾ ಪ್ರಪಂಚದ ವಿವಿಧ ಮಜಲುಗಳನ್ನು ಅರಿಯುವ ಅಭಿಲಾಷೆ ಮತ್ತು ತಿಳಿಸಿಕೊಡುವ ಸಾಹಿತ್ಯಾಸಕ್ತಿ ಇವೆರಡೂ ಸಹ ’ಚೌಕಟ್ಟಿನಾಚೆ...’ಯಲ್ಲಿ ತಿಳಿಯಬಹುದು. 

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books