ಕೊಚ್ಚರೇತ್ತಿ

Author : ನಾ. ದಾಮೋದರ ಶೆಟ್ಟಿ

Pages 179

₹ 100.00




Year of Publication: 2011
Published by: ಸಾಹಿತ್ಯ ಅಕಾಡೆಮಿ
Address: ರವೀಂದ್ರ ಭವನ, 35, ಫಿರೋಜಶಾಹ ರಸ್ತೆ, ನವದೆಹಲಿ-110001

Synopsys

‘ಕೊಚ್ಚರೇತ್ತಿ’ ಮಲೆಯಾಳಂ ಲೇಖಕ ನಾರಾಯಣ್ ಅವರ ಕಾದಂಬರಿಯ ಕನ್ನಡಾನುವಾದ. ಅನುವಾದಕರು ನಾ. ದಾಮೋದರ ಶೆಟ್ಟಿ. ಕೊಚ್ಚರೇತ್ತಿ’ ಅಂದರೆ ಕೊಚ್ಚು+ಅರೆಯತ್ತಿ- ಎಳೆಯ ವಯಸ್ಸಿನ ಸ್ತ್ರೀ ಎಂದರ್ಥ. ಆದಿವಾಸಿಗಳು ಮುಖ್ಯವಾಹಿನಿಗೆ ಬರಬೇಕೇ ಬೇಡವೇ ಎಂಬ ಚರ್ಚೆ ಕರ್ನಾಟಕದಲ್ಲೂ ಇದೆ. ಕಾಡಿನಿಂದ ಅವರು ಹೊರಗೆ ಬರಲಿ, ಆಧುನಿಕ ಅಭಯಾರಣ್ಯದ ಕಲ್ಪನೆಯಲ್ಲಿ ಗಿರಿಜನರು, ಆದಿವಾಸಿಗಳು ಕಾಡಿನಿಂದ ಹೊರಗೆ ಕಟ್ಟಿದ ಪುನರ್ವಸತಿ ಕೇಂದ್ರಗಳಲ್ಲಿರಬೇಕು ಎಂಬ ಆಳುವವರ ತಿಳಿವಳಿಕೆ ಪಶ್ಚಿಮ ಘಟ್ಟದ ಕಾಡುಗಳಿಗೆ ನಕ್ಸಲ್ ವಾದ ಬರುವಂತೆ ಮಾಡಿತು.

ಈಗ ಕೇರಳದ ವೈನಾಡಿನಲ್ಲಿ ಆದಿವಾಸಿ ಮಕ್ಕಳಿಗಾಗಿಯೇ ವಸತಿಶಾಲೆಗಳನ್ನು ಸರ್ಕಾರ ಮಾಡಿದೆ. ‘ಕೊಚ್ಚರೇತ್ತಿ’ ಸ್ವಾತಂತ್ರ್ಯ ಪೂರ್ವದ ಕಥನ. ಆದರೂ ಕಳೆದ ಶತಮಾನದ ಎಪ್ಪತ್ತರ ದಶಕದವರೆಗಿನ ಆರ್ಯನ್ನರ ವಿದ್ಯಾಭ್ಯಾಸ ಪಡೆದ ಮೇಲಿನ ಬದಲಾವಣೆಗಳನ್ನೂ ಒಳಗೊಂಡಿದೆ. ಮುಂದಿನ ತಲೆಮಾರು ಆಧುನಿಕತೆಯಲ್ಲಿ ಅತಂತ್ರರಾಗುವ ಚಿತ್ರವಿದೆ. ಆರ್ಯನ್ ಸಮುದಾಯದ ದೇಸಿಬನಿಯ ಮಲೆಯಾಳವನ್ನು ಅನುವಾದಿಸುವಾಗ ದಾಮೋದರ ಅವರು ಎಚ್ಚರದಿಂದ ಕಾಸರಗೋಡು ಸಮೀಪ ಬಳಕೆಯಲ್ಲಿರುವ ಕನ್ನಡ ಆಡುನುಡಿಯನ್ನು ಬಳಸಿದ್ದಾರೆ. ಇದರಿಂದಾಗಿ, ಮಲೆಯಾಳಂ ಮೂಲದ ಸಂಭಾಷಣೆಯ ಸ್ವಾರಸ್ಯ ಅನುವಾದದಲ್ಲಿ ಉಳಿದುಕೊಂಡಿದೆ. ಆದಿವಾಸಿಗಳ ಕಥೆಯನ್ನು ಒಬ್ಬ ಆದಿವಾಸಿಯೇ ಬರೆದಿರುವುದು ಈ ಕೃತಿಯ ಮಹತ್ವ. ಈ ಕುರಿತು ಲೇಖಕರು, ‘ಕೊಚ್ಚರೇತ್ತಿ’ ಓರ್ವ ಕೊಚ್ಚರೇತ್ತಿಯ ಮಗನಾದ ನಾನು ಬರೆದದ್ದು , ಯಾರನ್ನೂ ಅನುಕರಿಸಿಯೂ ಅಲ್ಲ ನನ್ನದೇ ಸ್ವಂತ ನನಗೆ ತೋಚಿದ ಶೈಲಿಯಲ್ಲಿ ಎಂದು ಹೇಳಿಕೊಂಡಿದ್ದಾರೆ.

About the Author

ನಾ. ದಾಮೋದರ ಶೆಟ್ಟಿ
(02 August 1951)

ನಾದಾ ಎಂತಲೂ ಕರೆಯಲಾಗುವ ನಾ. ದಾಮೋದರ ಶೆಟ್ಟಿ ಅವರು 1951 ಆಗಸ್ಟ್‌ 2ರಂದು ಕಾಸರಗೋಡಿನ ಕುಂಬಳೆಯಲ್ಲಿ ಜನಿಸಿದರು. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸುಳುವಿನೊಳಗೆ, ಸರದಿ (ಕಾದಂಬರಿ), ಕೆ.ಎನ್. ಟೇಲರ್‌, ಮುದ್ದಣ ಬದುಕು-ಬರಹ, ನಾರಾಯಣಗುರು, ಪೇಜಾವರ ಸದಾಶಿವರಾಯರು, ಕೆ.ವಿ. ಸುಬ್ಬಣ್ಣ (ವ್ಯಕ್ತಿ ಪರಿಚಯ), ಭತ್ತದ ಕಾಳುಗಳು, ಕರಿಯ ದೇವರ ಹುಡುಕಿ, ಅಶ್ವತ್ಥಾಮ, ಬಾಲ್ಯದ ನೆನಪುಗಳು, ದೇವರ ವಿಕರಾಳಗಳು, ಸಾಕ್ಷಾತ್ಕಾರ, ಮಹಾಕವಿ ಜಿ. ಶಂಕರ ಕುರುಪ್, ಭರತವಾಕ್ಯ (ಅನುವಾದ), ಅದ್ಭುತ ರಾಮಾಯಣ, ಸ್ವಾತಂತ್ರದ ಸ್ವರ್ಣಹೆಜ್ಜೆ, ಸಾನ್ನಿಧ್ಯ, ಪೋಲಿ, ...

READ MORE

Related Books