ಕ್ರೀಮ್ ಆಫ್ ಕೈಲಾಸಂ

Author : ಬಿ.ಎಸ್. ಕೇಶವರಾವ್

₹ 95.00




Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಕೈಲಾಸಂ ಅವರನ್ನು ಕರ್ನಾಟಕದ ಬರ್ನಾಡ್ ಷಾ ಎಂದು ಕರೆಯಲಾಗುತ್ತದೆ. ಇವರ ನಾಟಕಗಳು ಸಾಮಾಜಿಕ ವಿದ್ಯಮಾನಗಳ ವಿಷಯಾಧಾರಿಸಿ ಬರೆದಿದ್ದರೂ ಹೊಸ ಚಿಂತನೆಯೊಂದಿಗೆ ಕಂಗೊಳಿಸುತ್ತವೆ. ಬರೆಹಗಳಲ್ಲಿ ಹೊಸತನವಿದೆ. ವ್ಯಂಗ್ಯ-ಹಾಸ್ಯ-ವಿಡಂಬನೆ ಇದ್ದರೂ ಸಮಾಜ ತಿದ್ದುವತ್ತ ಈ ಬರೆಹಗಳು ತಮ್ಮ ಉದ್ದೇಶವನ್ನು ಕೇಂದ್ರೀಕರಿಸಿವೆ. ಇವರ ಪ್ರತಿ ಬರಹವೂ ಸಹ ಹಾಲಿನ ಕೆನೆಯಂತೆ ರುಚಿಕಟ್ಟಾಗಿ ಓದುಗನನ್ನು ರಂಜಿಸುತ್ತವೆ ಮಾತ್ರವಲ್ಲ ಸಮಾಜ ತಿದ್ದುವತ್ತ ಚಿಂತನೆಯನ್ನು ಪ್ರೇರೇಪಿಸುತ್ತವೆ. ಬಿ.ಎಸ್. ಕೇಶವರಾವ್ ಅವರು ಇಂತಹ ಬರೆಹ-ಲಲಿತ ಪ್ರಬಂಧಗಳನ್ನು ಸಂಗ್ರಹಿಸಿದ ಕೃತಿ ಇದಾಗಿದೆ.

About the Author

ಬಿ.ಎಸ್. ಕೇಶವರಾವ್
(15 December 1935)

ಮೂಲತಃ ಮೈಸೂರಿನವರಾದ (ಜನನ: 15-12-1935)  ಬಿ.ಎಸ್. ಕೇಶವರಾವ್ ಶಿಕ್ಷಣ ಇಲಾಖೆಯ ಪ್ರಾಧ್ಯಾಪಕ, ನಟ, ರಂಗಕರ್ಮಿ. ತಂದೆ ಬಿ.ಕೆ. ಸುಬ್ಬರಾವ್, ತಾಯಿ ನಾಗಲಕ್ಷ್ಮಮ್ಮ. ಮೈಸೂರಿನ ಸೇಂಟ್ ಫಿಲೋಮಿನ ಕಾಲೇಜಿನಿಂದ ಇಂಟರ್ ಮೀಡಿಯೆಟ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್‌ನಿಂದ ಡಿಪ್ಲೊಮಾ, ಮದರಾಸಿನ ಟೆಕ್ನಿಕಲ್ ಟೀಚಿಂಗ್ ಇನ್‌ಸ್ಟಿಟ್ಯೂಟಿನಿಂದ ಪದವಿ ಪಡೆದರು. ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಮೇಲ್ವಿಚಾರಕರಾಗಿ. ನಂತರ ಕಡಕ್‌ವಾಸ್ಲಾ, ಪೂನ, ಧೂಂಡ್‌ನಲ್ಲಿ ಕೆಲಕಾಲ. ನಂತರ ಅವರು ಶಿಕ್ಷಣ ಇಲಾಖೆಯಲ್ಲಿ ಅಧ್ಯಾಪಕರಾಗಿ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾದರು. ರಂಗ ಕಲಾವಿದರಾಗಿ, ಆಕಾಶವಾಣಿ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ನಟಿಸಿ ನಿರ್ದೇಶಿಸಿದರು. ಶಿವರಾಮಕಾರಂತರ ಅಧ್ಯಕ್ಷತೆಯಲ್ಲಿ (1955) ನಡೆದ ಕನ್ನಡ ಸಾಹಿತ್ಯ ...

READ MORE

Related Books