ಡಿಆರ್ ರ ಮೂಡು ಪಡು

Author : ಅಜಕ್ಕಳ ಗಿರೀಶ ಭಟ್

Pages 378

₹ 300.00




Year of Publication: 2016
Published by: ಚಿಂತನ ಬಯಲು
Address: 15-109, ಅನಿಕೇತನ, ಮೊಡಂಕಾಪು ಅಂಚೆ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ- 574219
Phone: 08255231107

Synopsys

ಚಿಂತಕ, ಲೇಖಕ ಡಾ. ಡಿ.ಆರ್. ನಾಗರಾಜ್ ಅವರ ಕೃತಿಗಳ ಸಮಗ್ರ ಅಧ್ಯಯನ ಕೃತಿ ಡಿಆರ್ ರ ಮೂಡು ಪಡು. ಲೇಖಕ ಅಜಕ್ಕಳ ಗಿರೀಶ ಭಟ್ ಈ ಕೃತಿಯನ್ನು ರಚಿಸಿದ್ದಾರೆ.

ಸಾಹಿತ್ಯ ಕಥನವನ್ನು ಸಾಂಸ್ಕೃತಿಕ ಕಥನವಾಗಿ ಪರಿಶೀಲಿಸಿಕೊಳ್ಳುವ ಮತ್ತು ಆ ಹಿನ್ನೆಲೆಯಲ್ಲಿ ಚಿಂತನೆಗಳನ್ನು ಮಂಡಿಸುವ ಡಿ.ಆರ್.ಎನ್. ಕನ್ನಡದಲ್ಲಿ ತಾತ್ವಿಕ ವಾಗ್ವಾದಗಳನ್ನು ಆಧುನಿಕತೆ ಕುರಿತ ವಾಗ್ವಾದಗಳು ಮತ್ತು ಅವುಗಳಿಗೆ ಕಂಡುಕೊಳ್ಳುವ ಪರ್ಯಾಯಗಳು ಬಹಳ ಮುಖ್ಯ ನೆಲೆಗಳಲ್ಲಿ ಗೋಚರಗೊಳ್ಳುತ್ತವೆ.

ಡಿ.ಆರ್.ನಾಗರಾಜ್ ಅವರ ಚಿಂತನೆಗಳ ಹಿನ್ನೆಲೆಯಲ್ಲಿ ಆಧುನಿಕತೆಯನ್ನು ವ್ಯಾಖ್ಯಾನಿಸುವ ಸಂಶೋಧಕರ ಪ್ರಯತ್ನ ಕನ್ನಡ ಸಂಶೋಧನೆ ವಲಯದಲ್ಲಿ ಮಹತ್ವದ ಮಾದರಿಯಾಗಿದೆ.

About the Author

ಅಜಕ್ಕಳ ಗಿರೀಶ ಭಟ್

ಅಜಕ್ಕಳ ಗಿರೀಶ್ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು. ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದರು. ಸದ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ.  ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅಂಚೆ ತೆರಪಿನ ಶಿಕ್ಷಣದ ಮೂಲಕ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ಡಾ. ಡಿ.ಆರ್. ನಾಗರಾಜ್‌ ಕುರಿತು ಒಂದು ಅಧ್ಯಯನದ ಬಗ್ಗೆ ಮಹಾಪ್ರಬಂಧವನ್ನು ರಚಿಸಿ ಡಾ. ಶಿವರಾಮಶೆಟ್ಟಿಯವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ಲೇಖನಗಳನ್ನು ಬರೆಯತೊಡಗಿದ ಅವರ ಐವತ್ತಕ್ಕೂ ಹೆಚ್ಚು ಲೇಖನಗಳು ...

READ MORE

Related Books