ದಾಸ ಭಾರತ

Author : ರಾಮದಾಸ್ (ಪ್ರೇಮ ಸೋದರ)

Pages 384

₹ 375.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ರಂಗಕರ್ಮಿ, ಸಾಹಿತಿ, ಲೇಖಕ, ನಿವೃತ್ತ ಪ್ರಾಧ್ಯಾಪಕ ಪ್ರೊ ರಾಮದಾಸ್‌ ಅವರ ಬರವಣಿಗೆಗಳ ಸಂಕಲನ ’ದಾಸ ಭಾರತ’.

ಕೃತಿಯ ಕುರಿತು ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿರುವ ಮುಖ್ಯ ಮಾತುಗಳು ಹೀಗಿವೆ: ’ವಾಸ್ತವಕ್ಕೆ ವಾಸ್ತವವಾದಿಯಾಗಿ ಸ್ಪಂದಿಸುವುದಿಲ್ಲ; ಆಳವಾದ ಹೃದಯವಂತಿಕೆಯಿಂದ, ಮುಗ್ಧತೆಯಿಂದ ಸ್ಪಂದಿಸುವುದು, ಒಳ್ಳೆಯ ಕಲೆಗೆ ಮುಗ್ಧತೆಯ ಒಡನಾಟ ಬೇಕು! ಒಮ್ಮೆ ಮಹಾಕಾವ್ಯವೊಂದರ ರಚನೆಯಾದ ಮೇಲೆ ರಚನೆಯಾಗಿ ಅದು ಸಮುದಾಯದ ಭಾಗವಾಗಿ ಸಮುದಾಯದ ಸುಪ್ತಮನದಲ್ಲಿ ಅನನ್ಯವಾಗಿ ಸೇರಿಕೊಂಡ ಮೇಲೆ ಮುಂದಿನ ಕವಿಗಳ ಸೃಷ್ಟಿಶೀಲತೆಯ ದಾರಿ ಎಂದರೆ-ಮತ್ತೆ ಈ ಮಹಾಕಾವ್ಯದ ಬಸಿರಿನಿಂದ ತುಂಡು ತುಣುಕುಗಳನ್ನು ಹಿಸಿದು, ಯುಕ್ತ-ಕಂಡಂತೆ ಬೆಳೆಸುತ್ತ ಹೋಗುವುದು. ಒಂದೊಂದು ಪಾತ್ರಗಳನ್ನು ಕೇಂದ್ರಸ್ಥಾನದಲ್ಲಿರಿಸುತ್ತ ಅವುಗಳ ದೃಷ್ಟಿಕೋನದ ಸುತ್ತ ಕಥನವನ್ನು ಬೆಳೆಸುತ್ತ ಹೋಗುವುದು. ಇದು ತುಪ್ಪದ ಕೊಡದಲ್ಲಿ ತುಣುಕುಗಳನ್ನು ಇನ್ನೊಮ್ಮೆ ಬೆಳೆಯಿಸಿದಂತೇ ಕವಿ ಪ್ರತಿಭೆ ಎಂಬ ತುಪ್ಪದ ಕೊಡ! ಪಾತ್ರಗಳನ್ನು ಮತ್ತೆ ಮತ್ತೆ ಕಟ್ಟುವುದು; ಮುರಿದು ಕಟ್ಟುವುದು; ಬಗೆಬಗೆಗಳಲ್ಲಿ ಕಟ್ಟುವುದು; ಕಟ್ಟುವಾಗ ಮುರಿಯುವ ಹೊಳಹು; ಮುರಿಯುವಾಗ ಕಟ್ಟುವ ಹೊಳಹು-ಇದು ಅದೃಷ್ಟದ ಜೊತೆಗಿನ ಆಟ. ಆಟವಾಡುತ್ತಲೇ ಅದೃಷ್ಟವನ್ನು ತಮಗೆ ಬೇಕಾದಂತೆ ರೂಪಿಸುವ ಆಟವೂ ಹೌದು, ಕ್ಷಮೆ ಇರಲಿ-ನನಗೊಮೊಮ್ಮೆ ಅನ್ನಿಸುತ್ತದೆ; ತುಪ್ಪದ ಕೊಡದಲ್ಲಿ ಬೆಳೆದ ನೂರೊಂದು ಮಕ್ಕಳಲ್ಲಿ ವಾಸ್ತವವಾದವೂ ಒಂದು ಎಂದು! ಈ ಮಾತನ್ನು ಇನ್ನಷ್ಟು ವಾಸ್ತರ್ವಗೊಳಿಸಬೇಕೆಂದರೆ, ವಾಸ್ತವವಾದವು ನೂರೊಂದು ಮಕ್ಕಳಲ್ಲಿ ಎಲ್ಲರಿಗಿಂತ ಭಿನ್ನವಾಗಿರುವ-ವಿಕರ್ಣನಂತೆ! ನಮ್ಮ ರಾಮದಾಸರು ತಮ್ಮ 'ದಾಸಭಾರತ'ವನ್ನು ಬರೆಯುತ್ತ ಬರೆಯುತ್ತ ತಮ್ಮನ್ನು ತಾವೇ ಮೀರುತ್ತಿದ್ದಾರೆ; ತಮ್ಮ ವಾಸ್ತವವಾದವನ್ನೂ ಮೀರುತ್ತಿದ್ದಾರೆ ಎನ್ನಿಸುತ್ತದೆ. 'ಜಯ' ಮತ್ತೆ ಮತ್ತೆ ಜನ್ಮವೆತ್ತುತ್ತಲೇ ಇರುತ್ತಾಳೆ ಎನ್ನುತ್ತಾರೆ. ಆದರೂ ಎಲ್ಲ ಅರ್ಥವಾಯಿತು ಎನ್ನುವಂತಿಲ್ಲ-ಎನ್ನುತ್ತಾರೆ. ಅರ್ಥವಾಗಲಿಲ್ಲ ಎನ್ನುವ ಮಾತು ಯಾವುದು ಅರ್ಥವಾಗಲಿಲ್ಲವೋ ಅದನ್ನು ಪ್ರೀತಿಸಲು ಎರವಾಗಬೇಕು ಎನ್ನುವ ಮಾತಂತೂ ಅಲ್ಲ ಎನ್ನುವುದು ಅವರಿಗೆ ತಿಳಿದುಬಿಟ್ಟಿದೆ. ಪ್ರತ್ಯುತ, ಅರ್ಥವಾಗದೆ ಇದ್ದುದು ಆ ಕಾರಣದಿಂದಲೇ, ನಮ್ಮಲ್ಲಿ ಇನ್ನಷ್ಟು ಪ್ರೀತಿಯನ್ನು ಉಂಟುಮಾಡುತ್ತಿದೆ ಎನ್ನುವುದನ್ನೂ ರಾಮದಾಸರು ಅನುಭವಿಸುತ್ತಿದ್ದಾರೆ. ದಾಸಭಾರತದ ಕೊನೆಯ ಸಾಲು ಹೀಗಿದೆ: “ಜಯ ಮತ್ತೆ ಮತ್ತೆ ಜನ್ಮವೆತ್ತುತ್ತಲೇ ಇರುತ್ತಾಳೆ ಅರ್ಥವಾಗದ ಬದುಕು ಸಾಗುತ್ತಿರುತ್ತದೆ!" ಈ ಸಾಲಿಗೆ, ಅರ್ಥದ ಹಂಗಿಲ್ಲದೆ ಎಂಬೆರಡು ಪದಗಳನ್ನು ಸೇರಿಸಿ, ಅರ್ಥವಾಗದ ಬದುಕು ಅರ್ಥದ ಹಂಗಿಲ್ಲದೆ ಸಾಗುತ್ತಿರುತ್ತದೆ ಎಂದು ಗೆಳೆಯ ರಾಮದಾಸರಿಗೆ ಅಭಿನಂದನೆಗಳನ್ನು ಹೇಳುತ್ತೇನೆ...

About the Author

ರಾಮದಾಸ್ (ಪ್ರೇಮ ಸೋದರ)
(01 February 1940)

ರಾಮದಾಸ್ ಅವರು ಹುಟ್ಟಿದ್ದು 01-02-1940 ರಲ್ಲಿ. ಅವರ ವಿದ್ಯಾಭ್ಯಾಸ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಗುಂಡ್ಲುಪೇಟೆ, ಟಿ.ನರಸೀಪುರ, ವಿದ್ಯೋದಯ ಶಾಲೆ ಟಿ.ನರಸೀಪುರ, ಯುವರಾಜಾಸ್ ಕಾಲೇಜು ಮೈಸೂರು, ಮಹಾರಾಜಾಸ್ ಕಾಲೇಜು, ಈಸೂರು, ಮಾನಸ ಗಂಗೋತ್ರಿ, ಮೈಸೂರು, ಎಂ.ಎ. ಮಾಡಿದ್ದಾರೆ. ಮುಲ್ಕಿ ವಿಜಯ ಕಾಲೇಜಿನಲ್ಲಿ ಮೂರು ವರ್ಷ ಕನ್ನಡ ಉಪನ್ಯಾಸಕರಾಗಿ, ಪೂರ್ಣ ಪ್ರಜ್ಞಾ ಕಾಲೇಜು, ಉಡುಪಿ-ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಪ್ರಕಟಿತ ಕೃತಿಗಳು: ಕಾವ್ಯ: ಋತಗೀತಾಮೃತ. ಕವನಗಳು- ಸ್ವಾತಂತ್ರೆಶ್ವರ ವಚನಗಳು, ಭಸ್ಮಾಸುರ, ಹದಿಹರೆಯದ ಹುಡುಗರು, ಹನಿಮಿನಿ, ಹಾಡು-ಪಾಡು. ನಾಟಕಗಳು: ಇದು ಭಾರತ, ಹೇಡಿಗಳು, ಬೆದರುಬೊಂಬೆ, ತಲೆದಂಡ, ಗರುಡಗಂಬ, ಸಾಕ್ಷಾತ್ಕಾರ,  ಜೀವದಯಾಷ್ಟಮಿ ಮತ್ತು ಇತರ ನಾಟಕಗಳು. ...

READ MORE

Related Books