ದಲಿತ ಚಳವಳಿ ಚರಿತ್ರೆ ಸಂಪುಟ-1

Author : ವಿ. ಮುನಿವೆಂಕಟಪ್ಪ

Pages 668

₹ 668.00




Year of Publication: 2013
Published by: ಎಸ್.ಎಂ.ಎಸ್. ಪಬ್ಲಿಕೇಷನ್ಸ್
Address: #61, 6ನೇ ಅಡ್ಡರಸ್ತೆ, ಹೆಬ್ಬಾಳ ಮುಖ್ಯರಸ್ತೆ, ಕಾವೇರಿ ಗ್ರಾಮೀಣ ಬ್ಯಾಂಕ್ ಸಮೀಪ, ಮಂಚೇಗೌಡನಕೊಪ್ಪಲು, ಮೈಸೂರು-570017

Synopsys

ಡಾ. ವಿ. ಮುನಿವೆಂಕಟಪ್ಪ ಅವರು ಬರೆದ ಕೃತಿ-ದಲಿತ ಚಳವಳಿ ಚರಿತ್ರೆ ಸಂಪುಟ-1. ಸ್ವತಃ ಲೇಖಕರು ದಲಿತ ಚಳವಳಿಯಲ್ಲಿ ಪಾಲ್ಗೊಂಡಿದ್ದು, 1970ರಲ್ಲಿ ಆರಂಭವಾದ ದಲಿತ ಚಳವಳಿಯ ಏಳು-ಬೀಳುಗಳು, ಬುದ್ಧ-ಬಸವ ಹಾಗೂ ಆಂಬೇಡ್ಕರರ ವಿಚಾರಗಳನ್ನು ಜನಸಾಮಾನ್ಯರಲ್ಲಿ ವಿಶೇಷವಾಗಿ ದಲಿತರಲ್ಲಿ ಮೂಡಿಸಲು ಯತ್ನಿಸಲಾಗಿತ್ತು. ಚಳವಳಿಯು ಸುಮಾರು 10 ವರ್ಷ ಕಾಲ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ನಂತರದ ಕಾಲದಲ್ಲಿ ಸೂಕ್ತ ನಾಯಕತ್ವದ ಅಭಾವದೊಂದಿಗೆ ಪ್ರಭಾವ ತಗ್ಗುತ್ತಾ ಬಂತು. ಈ ಹಿನ್ನೆಲೆಯಲ್ಲಿ, ಎಲ್ಲವನ್ನೂ ದಾಖಲಿಸುವ ಈ ಕೃತಿ ಐತಿಹಾಸಿಕವಾಗಿಯೂ ಮಹತ್ವ ಪಡೆಯುತ್ತದೆ. ಸಾಹಿತಿ ನಾ. ದಿವಾಕರ ಅವರು ಮುನ್ನುಡಿ ಬರೆದಿದ್ದು, ಶೋಷಿತ ಸಮುದಾಯಗಳ ಸಾಂಸ್ಕೃತಿಕ-ಸಾಮಾಜಿಕ ಬದುಕಿನ ಮಹತ್ವವನ್ನು ಒಂದೆಡೆ ಕಟ್ಟಿಕೊಟ್ಟ ಲೇಖನಗಳನ್ನು ಸಂಗ್ರಹಿಸಿ ನೀಡಿದ್ದು ದೊಡ್ಡ ಕೆಲಸ ಎಂದು ಪ್ರಶಂಸಿಸಿದ್ದಾರೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books