ದಲಿತ ಚಳವಳಿ ಚರಿತ್ರೆ ಸಂಪುಟ-13

Author : ವಿ. ಮುನಿವೆಂಕಟಪ್ಪ

Pages 288

₹ 430.00




Year of Publication: 2017
Published by: ಶ್ರೀ ಮರಡಿಲಿಂಗೇಶ್ವರ ಪ್ರಕಾಶನ
Address: #356, 3ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, A-1 ಬ್ಲಾಕ್, ವಿಜಯನಗರ 3ನೇ ಹಂತ, ಮೈಸೂರು-570030,

Synopsys

ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ದಲಿತ ಚಳವಳಿ ಚರಿತ್ರೆ ಸಂಪುಟ-13.ಕರ್ನಾಟಕದಲ್ಲಿ ದಲಿತ ಚಳವಳಿಗೆ ಒಂದು ಸುದೀರ್ಘ ಇತಿಹಾಸವಿದೆ. 1970ರಲ್ಲಿ ದಲಿತ ಚಳವಳಿ ಆರಂಭವಾಯಿತು. ಕನಿಷ್ಟ 10 ವರ್ಷ ಕಾಲ ತನ್ನ ಬದ್ಧತೆಯನ್ನು ಉಳಿಸಿಕೊಂಡಿತ್ತು. ಶಕ್ತಿ ಮೀರಿ ಜನಜಾಗೃತಿ ಮೂಡಿಸುವಲ್ಲಿ ಸಫಲವಾಗಿತ್ತು. ಕಾಲಾನಂತರ ನಾಯಕತ್ವದ ಅಭಾವದೊಂದಿಗೆ ಚಳವಳಿ ಕಾವು ಕಳೆದುಕೊಂಡು, ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೌಲ್ಯಗಳು ಮಸುಕಾದವು. ಸ್ವತಃ ಲೇಖಕರು ದಲಿತ ಚಳವಳಿಯಲ್ಲಿ ಪಾಲ್ಗೊಂಡಿದ್ದು, ಆ ಹಾದಿಯಲ್ಲಿಯ ಏಳು-ಬೀಳುಗಳನ್ನು ಇಲ್ಲಿ ವಿಶ್ಲೇಷಿಸಿರುವ ಲೇಖನಗಳನ್ನು ಸಂಗ್ರಹಿಸಿದ್ದೇ ಈ ಕೃತಿ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books