ದಲಿತ ಚಳವಳಿ ಚರಿತ್ರೆ ಸಂಪುಟ-7

Author : ವಿ. ಮುನಿವೆಂಕಟಪ್ಪ

Pages 480

₹ 460.00




Year of Publication: 2013
Published by: ಎಸ್.ಎಂ.ಎಸ್. ಪಬ್ಲಿಕೇಷನ್ಸ್
Address: # 61, 6ನೇ ಅಡ್ಡರಸ್ತೆ, ಹೆಬ್ಬಾಳ ಮುಖ್ಯ ರಸ್ತೆ, ಕಾವೇರಿ ಗ್ರಾಮೀಣ ಬ್ಯಾಂಕ್ ಸಮೀಪ, ಮಂಚೇಗೌಡನಕೊಪ್ಪಲು, ಮೈಸೂರು-570017

Synopsys

ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ದಲಿತ ಚಳವಳಿ ಚರಿತ್ರೆ ಸಂಪುಟ-7. ಪುರೋಹಿತಶಾಹಿ, ರಾಜಕೀಯಶಾಹಿ, ಜಮೀನುದಾರಶಾಹಿ, ಅಧಿಕಾರ ಶಾಹಿ ಹಾಗೂ ಬಂಡವಾಳಶಾಹಿ-ಇವು ಭಾರತವನ್ನು ನಿಯಂತ್ರಿಸುತ್ತವೆ ಎಂಬುದು ಅಂಬೇಡ್ಕರರ ಖಚಿತವಾದ ಪ್ರತಿಪಾದನೆ. ಇಂದಿಗೂ ಈ ವಿಚಾರ ತನ್ನ ನಿಲುವಿನಿಂದ ಬದಲಿಯಾಗಿಲ್ಲ. ಆದರೆ, ತನ್ನೊಳಗಿನ ಕಚ್ಚಾಟದಿಂದ ನಾಯಕತ್ವದ ಅಭಾವ ಎದುರಾಗಿ ದಲಿತ ಚಳವಳಿಯು ಕರ್ನಾಟಕದಲ್ಲಿ ಕುಸಿಯುತ್ತಾ ಬಂದಿತ್ತು. ಈ ಕುರಿತ ಲೇಖನಗಳು ನಾಡಿನೆಲ್ಲೆಡೆಯಿಂದ ಹರಿದು ಬಂದಿದ್ದು, ಅವುಗಳ ಸಂಗ್ರಹವೇ ಈ ಕೃತಿ. ಡಾ.. ವರದರಾಜು ಅವರು ಕೃತಿಗೆ ಮುನ್ನುಡಿ ಬರೆದಿದ್ದು, ದಲಿತ ಚಳವಳಿಯನ್ನು ನೈಜ ಹಕೀಕತ್ತುಗಳೊಡನೆ ದಾಖಲಿಸುವ ಲೇಖಕರ ಕಳಕಳಿಯನ್ನು ಪ್ರಶಂಸಿಸಿದ್ದಾರೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books