ದಲಿತ ಚಳವಳಿ ಚರಿತ್ರೆ ಸಂಪುಟ-8

Author : ವಿ. ಮುನಿವೆಂಕಟಪ್ಪ

Pages 488

₹ 490.00




Year of Publication: 2014
Published by: ಉನ್ನತಿ ಪ್ರಕಾಶನ
Address: # 2542, 2ನೇ ಮಹಡಿ, ಹೆಬ್ಬಾಳ್ 2ನೇ ಹಂತ, ರೇಣುಕಾ ಯಲ್ಲಮ್ಮ ದೇವಸ್ಥಾನ ಬಳಿ, ಮೈಸೂರು-570017

Synopsys

ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ದಲಿತ ಚಳವಳಿ ಚರಿತ್ರೆ ಸಂಪುಟ-8. ಈ ಕೃತಿಯು ಒಟ್ಟು 140 ಅಧ್ಯಾಯಗಳನ್ನು ಒಳಗೊಂಡಿದೆ. ಸಾಮಾಜಿಕ ದರ್ಶನ (12 ಲೇಖನಗಳು), ಹೋರಾಟದ ದರ್ಶನ (44 ಲೇಖನಗಳೂ) ಹಾಗೂ ದಲಿತ ಸಾಹಿತ್ಯ ದರ್ಶನ (59 ಲೇಖನಗಳು) ಎಂಬ ಮೂರು ವಿಭಾಗಗಳಿದ್ದು, ನಾಡಿನ ವಿವಿಧೆಡೆಯಿಂದ ಬಂದ ಲೇಖಕರ ಅಭಿಪ್ರಾಯ ರೂಪದ ಬರೆಹಗಳನ್ನು ಸರಣಿ ರೂಪದಲ್ಲಿ ಪ್ರಕಟಗೊಳಿಸಿದ್ದ ಫಲವೇ ಈ ಕೃತಿ.ಸ್ವತಃ ಲೇಖಕರದ್ದೇ 12 ಲೇಖನಗಳಿವೆ. ದಿನಪತ್ರಿಕೆಗಳ ಲೇಖನಗಳು, ಮಹಿಳಾ ಸಂವೇದನೆ, ಅಂಬೇಡ್ಕರ್- ಮಾರ್ಕ್ಸ್ ಇತರರ ವಿಚಾರಗಳ ಲೇಖನಗಳು ಈ ಕೃತಿಯ ಮೌಲ್ಯ ಹೆಚ್ಚಿಸಿವೆ. ಕೃತಿಗೆ ಸಿ.ವಿ. ಲಕ್ಷ್ಮಣರಾವ್ ಅವರು ಮುನ್ನುಡಿ ಬರೆದಿದ್ದಾರೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books