ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ

Author : ಆರ್.ಪಿ. ಹೆಗಡೆ

Pages 128

₹ 80.00




Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ದಲಿತ ಸಾಹಿತ್ಯವನ್ನು ಒಂದು ನಿರ್ದಿಷ್ಟ ಆವರಣದೊಳಗಿಟ್ಟು ನೋಡುವವರಿದ್ದಾರೆ. ಸಾಹಿತಿಗಳು, ವಿಮರ್ಶಕರಿಗೇ ಇಂತಹ ಪ್ರಕಾರದ ಬಗ್ಗೆ ಮಡಿವಂತಿಕೆ ಇರುವುದು ಸುಳ್ಳಲ್ಲ. ದಲಿತನಿಂದ ಮಾತ್ರ ದಲಿತ ಸಾಹಿತ್ಯ ಸೃಷ್ಟಿಯಾಗುತ್ತದೆಯೇ? ಬೇರೆಯವರು ದಲಿತರ ಬಗ್ಗೆ ಬರೆದರೆ ಅದನ್ನು ಹೇಗೆ ಪರಿಗಣಿಸುವುದು ಎಂಬ ಪ್ರಶ್ನೆಗಳಿವೆ. ಈ ಪ್ರಶ್ನೆ, ಸಂಶಯಗಳಿಗೆ ಉತ್ತರ ಕಂಡುಕೊಳ್ಳುವ ಯತ್ನ ಎಂಬಂತೆ ಹಿಂದಿಯ ಖ್ಯಾತ ಲೇಖಕ ಓಮ್ ಪ್ರಕಾಶ್‌ ವಾಲ್ಮೀಕಿ ದಲಿತ ಸಾಹಿತ್ಯಕ್ಕೆ ತನ್ನದೇ ಆದ ಪ್ರತ್ಯೇಕ ಸೌಂದರ್ಯಶಾಸ್ತ್ರದ ಅಗತ್ಯವಿದೆ ಎಂದು ಹೇಳುತ್ತಾರೆ. ಅವರು ಎತ್ತಿರುವ ಧ್ವನಿ ದಲಿತ ಸಾಹಿತ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡುವಲ್ಲಿ ಅನುಮಾನವೇ ಇಲ್ಲ.

ಅವರು ಹಿಂದಿ ಸಾಹಿತ್ಯ ಸಂದರ್ಭವನ್ನು ಇಟ್ಟುಕೊಂಡು ಚರ್ಚೆ ನಡೆಸಿದ್ದಾರಾದರೂ ಕನ್ನಡ ಸಾಹಿತ್ಯ ಸಂದರ್ಭಕ್ಕೆ ಅವು ಅನ್ವಯವಾಗುವುದರಿಂದ ಆರ್‌. ಪಿ. ಹೆಗಡೆ ಅವರ ಅನುವಾದ ಸಕಾಲಿಕವೂ ಮೌಲಿಕವೂ ಆಗಿದೆ. ಜೀವನದ ಬೇರೆ ಬೇರೆ ನೆಲೆಗಳನ್ನು ಮತ್ತು ದಲಿತ ಸಾಹಿತ್ಯವನ್ನು ಒಟ್ಟಿಗೆ ಇಟ್ಟು ನೋಡುವ ಯತ್ನ ಕೃತಿಯದ್ದು. .ದಲಿತ ಸಾಹಿತ್ಯದ ಪ್ರಸ್ತುತತೆ, ದಲಿತತ್ವದ ಅಭಿವ್ಯಕ್ತಿ, ವೈಚಾರಿಕತೆ ಮತ್ತು ದಾರ್ಶನಿಕತೆ, ರಾಜಕೀಯ, ಆರ್ಥಿಕ ಸಿದ್ದಾಂತಗಳನ್ನು ಇಲ್ಲಿ ಒರೆಗೆ ಹಚ್ಚಲಾಗಿದೆ. 

About the Author

ಆರ್.ಪಿ. ಹೆಗಡೆ - 29 January 2019)

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪದವಿ ಕಾಲೇಜಿನಲ್ಲಿ ಸುದೀರ್ಘ - ಅವಧಿಯವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಆರ್ ಪಿ ಹೆಗಡೆ ಅವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಎಂಟು, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ 25ಕ್ಕೂ ಹೆಚ್ಚು ಕೃತಿಗಳು ಮತ್ತು ಕನ್ನಡದಿಂದ ಹಿಂದಿಗೆ ಅನುವಾದಿಸಿದ ನಾಲ್ಕು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅನೇಕ ಸಣ್ಣ ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಹೆಗಡೆಯವರಿಗೆ ಶಿರಸಿಯ ಕವಿ ಕಾವ್ಯ ...

READ MORE

Related Books