ದಲಿತರು ಮತ್ತು ಮಾಧ್ಯಮ

Author : ಎಮ್. ದಿಲೀಪ್ ಕುಮಾರ್

Pages 120

₹ 100.00




Published by: ತಾರಾ ಪ್ರಿಂಟ್ಸ್

Synopsys

ಸಹಸ್ರಾರು ವರ್ಷಗಳಿಂದ ನಮ್ಮ ಸಮಾಜದಲ್ಲಿ ದಲಿತರ ಮೇಲೆ ನಿರಂತರವಾಗಿ ನಡೆಸುತ್ತಾ ಬಂದಿರುವ ದೌರ್ಜನ್ಯ, ದಬ್ಬಾಳಿಕೆ, ಶೋಷಣೆ ಇತ್ಯಾದಿ ಮನುಷ್ಯ ವಿರೋಧಿ ನಡವಳಿಕೆಗಳು ಸ್ವಾತಂತ್ರಾ ನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನದಲ್ಲಿ ದಲಿತರನ್ನು ಶೋಷಣೆಯಿಂದ ಮುಕ್ತ ಮಾಡಲು ಹಾಗೂ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮೀಸಲಾತಿ ಸೌಲಭ್ಯ ಸೇರಿದಂತೆ ಹಲವಾರು ಪ್ರಗತಿಪರ ಕ್ರಮಗಳಿಗೆ ಆದ್ಯತೆ ನೀಡಿದರೂ ಇನ್ನೂ ಒಂದಿಲ್ಲೊಂದು ರೀತಿಯಲ್ಲಿ ಮುಂದುವರಿಯುತ್ತಲೇ ಇವೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಎಷ್ಟು ಗಮನ ಕೊಡಬೇಕಿತ್ತೊ, ಸರಕಾರ ಹಾಗೂ ಸಮಾಜದ ಕಿವಿ ಹಿಂಡಬೇಕಿತ್ತೋ ಅದರಲ್ಲಿ ಅವು ವಿಫಲವಾಗಿವೆ ಎಂಬುವುದು ವಿಷಾದದ ಸಂಗತಿ. ಇದಕ್ಕೆ ಪ್ರಮುಖ ಕಾರಣ ಬಹುಪಾಲು ಮಾಧ್ಯಮಗಳು ಉಳ್ಳವರ ಹಾಗೂ ಮೇಲ್ದಾತಿಯವರ ಹಿಡಿತದಲ್ಲಿರುವುದು ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ದಲಿತರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇರುವುದೇ ಆಗಿದೆ. ದಲಿತರನ್ನು ಹಾಗೂ ಸಮಾನತೆ ಬಯಸುವ ಜನರನ್ನು ಕಾಡುತ್ತಿರುವ ಈ ಸಂಗತಿಯನ್ನು ಸ್ವತಃ ಮಾಧ್ಯಮ ಕ್ಷೇತ್ರದಲ್ಲಿದ್ದು ಪಿಎಚ್‌ಡಿಗಾಗಿ ಸಂಶೋಧನೆ ನಡೆಸುತ್ತಿರುವ ದಿಲೀಪ್ ಕುಮಾರ್ ಎಂ. (ದಿಲೀಪ್ ನರಸಯ್ಯ) ಅವರು ಈ ದಲಿತರು ಮತ್ತು ಮಾಧ್ಯಮ' ಎಂಬ ತಮ್ಮ ಕೃತಿಯ ಲೇಖನದಲ್ಲಿ ಬಹು ಪರಿಣಾಮಕಾರಿಯಾಗಿ ವಿಶ್ಲೇಷಿಸಿ ಓದುಗರ ಮುಂದಿಟ್ಟಿದ್ದಾರೆ.

Related Books