ದಣಿದ ಮೌನ

Author : ಮಹಾಂತೇಶ ಗೋನಾಲ

Pages 83

₹ 80.00




Year of Publication: 2021
Published by: ಬಹುತ್ವ ಪ್ರಕಾಶನ
Address: ದೇವರಗೋನಾಲ, ಸುರಪುರ ತಾಲೂಕು ಯಾದಗಿರಿ ಜಿಲ್ಲೆ.
Phone: 9686719573

Synopsys

ಮಹಾಂತೇಶ ಗೋನಾಲ ’ದಣಿದ ಮೌನ’ ಕೃತಿಯು ಗಜಲ್ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ನಾಡೋಜ ಬರಗೂರು ರಾಮಚಂದ್ರಪ್ಪ ಅವರು, ’ದಣಿದ ಮೌನ’ ಎಂಬ ಗಜಲ್ ಸಂಕಲನವು ಅವರ ಕಾವ್ಯ ಪ್ರತಿಭೆಯ ಪ್ರಭೆಯನ್ನು ಬೆಳಗುವ ಕೆಲವು ರಚನೆಗಳಿಂದ ಕೂಡಿದೆ. ಮೌನವೇ ಮಾತಾಗಿರುವ ಈ ರಚನೆಗಳಲ್ಲಿ ವಿಷಾದ, ಉತ್ಸಾಹ ಮತ್ತು ವಿವೇಕಗಳು ಮುಪ್ಪುರಿಗೊಂಡಿವೆ. ಮೌನದೊಳಗಿನ ಉರಿಯನ್ನು ಮತ್ತು ಸುಡುವ ಅನುಭವದ ಪರಿಯನ್ನು ಸಂಯಮದ ಅಭಿಯುಕ್ತಿಯಾಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಈ ಸಂಕಲನವು ಸಮರ್ಥವಾಗಿ ಧ್ವನಿಸುತ್ತದೆ. ಗಜಲ್ ಗಳಿಗೆ ಮಾನ್ಯವೆಂದು ಭಾವಿಸುತ್ತಾ ಬಂದಿರುವ ಪ್ರೇಮ, ವಿರಹ, ವಿಷಾದ, ವೈರಾಗ್ಯ, ವೈರುಧ್ಯಗಳಲ್ಲದೆ ಸಾಮಾಜಿಕ ಸಂಕಟಗಳನ್ನು ಸಂಕೇತಿಸುವ ಮತ್ತು ರೂಪಕಾತ್ಮಕಗೊಳಿಸುವ ಕೆಲವು ವಿಶಿಷ್ಟ ರಚನೆಗಳಿಂದ ಮಹಾಂತೇಶ ಗೋನಾಲ ಕಾವ್ಯಕ್ಕೊಂದು ಸಾಮಾಜಿಕ ಸಾಕ್ಷಿತನದ ಸೃಜನಶೀಲ ಗುಣ ಲಭ್ಯವಾಗಿದೆ. ಈ ಗಜಲ್ ಸಂಕಲನದ ಮೂಲಕ ಮಹಾಂತೇಶ ಗೋನಾಲರು ಒಬ್ಬ ಗಮನಾರ್ಹ ಕವಿಯಾಗಿ ಹೊರ ಹೊಮ್ಮಿದ್ದಾರೆ.

About the Author

ಮಹಾಂತೇಶ ಗೋನಾಲ

ಮಹಾಂತೇಶ ಗೋನಾಲ ಅವರು ಮೂಲತಃ ಯಾದಗಿರಿಯ ಸುರಪುರ ತಾಲೂಕಿನ ದೇವರಗೋನಾಲದವರು. ಸದ್ಯ ಸರಕಾರಿ ಪ್ರೌಢಾಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯಿಂದ ಶಿಕ್ಷಕರಾದರೂ ಸಾಹಿತ್ಯದೆಡೆಗೆ ವಿಶೇಷ ಒಲವು ಇಟ್ಟುಕೊಂಡಿದ್ದಾರೆ. ಮೊದಲ ಪುಸ್ತಕ 'ದಣಿದ ಮೌನ'- ಈ ಪುಸ್ತಕ ಕರ್ನಾಟಕ ಸರಕಾರ ಯುವ ಬರಹಗಾರರ ಚೊಚ್ಚಲ ಕೃತಿಗಳಿಗೆ ನೀಡುವ 2020ನೇ ಸಾಲಿನ ಪ್ರೋತ್ಸಾಹ ಧನವನ್ನು ಪಡೆದಿದೆ. ಕೃತಿಗಳು: ದಣಿದ ಮೌನ(ಗಜಲ್ ಸಂಕಲನ), 'ಚಾಡಮಾರಿ ಶಹರಗಳು(ಗಜಲ್ ಸಂಕಲನ). ...

READ MORE

Related Books