ದರ್ಶನ

Author : ಮಲ್ಲಿನಾಥ ಶಿ. ತಳವಾರ

Pages 148

₹ 50.00




Year of Publication: 2011
Published by: ಕನ್ನಡ ಸಾಹಿತ್ಯ ಪರಿಷತ್ತು
Address: ತಾಲೂಕು-ಜಿಲ್ಲೆ ಕಲಬುರಗಿ 

Synopsys

ಕಲಬುರಗಿ ತಾಲೂಕು ಮೂರನೇಯ ಕನ್ನಡ ಸಾಹಿತ್ಯ ಸಮ್ಮೇಳನದ (ಫರಹತಾಬಾದ)  ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಸ್ಮರಣ ಸಂಚಿಕೆ-ದರ್ಶನ.ಕಲಬುರಗಿ ತಾಲೂಕನ್ನು ಸಮಗ್ರವಾಗಿ ಪರಿಚಯಿಸುತ್ತದೆ. ಸಾಹಿತಿ ಸಂಧ್ಯಾ ಹೊನಗುಂಟಿಕರ್ ಅವರು ಪ್ರಧಾನ ಸಂಪಾದಕರು ಹಾಗೂ ಮಲ್ಲಿನಾಥ ಎಸ್. ತಳವಾರ ಮತ್ತು ಅಪ್ಪಾರಾವ್ ಎಸ್. ಕುಲಕರ್ಣಿ ಅವರು ಸಂಪಾದಕರು. 

ಸಂಚಿಕೆಯು 14 ಪರಿವಿಡಿಗಳನ್ನು ಹೊಂದಿದೆ. ಕಲಬುರಗಿಯಲ್ಲಿಯ ವೈಜ್ಞಾನಿಕ ಸಾಧನೆ, ಕಲಾ ಪರಂಪರೆ, ಪ್ರೇಕ್ಷಣೀಯ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳ ಮಹತ್ವ, ಸಾಹಿತ್ಯ ಆಧಾರಿತ ಅಂಶಗಳು, ಜನರ ಆಚಾರ- ವಿಚಾರಗಳು, ವೈವಿಧ್ಯಮಯವಾದ ವಿಧಿ- ವಿಧಾನಗಳ ಮೇಲೆ ಬೆಳಕು ಚೆಲ್ಲುತ್ತದೆ. ಅಭ್ಯಾಸಿಗಳಿಗೆ, ಸಂಶೋಧಕರಿಗೆ, ಪ್ರವಾಸಿಗರಿಗೆ ಈ ಸಂಚಿಕೆಯು ಆಕರ ಗ್ರಂಥವಾಗಿದೆ ಎಂಬುದು ಸಂಪಾದಕರ ಅಭಿಪ್ರಾಯವಾಗಿದೆ.

About the Author

ಮಲ್ಲಿನಾಥ ಶಿ. ತಳವಾರ
(11 July 1979)

ಲೇಖಕ ಮಲ್ಲಿನಾಥ ಶಿ. ತಳವಾರ ಅವರು ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರು (ಜನನ: 11-07-1979)  ಗ್ರಾಮದವರು. ಗುಲಬರ್ಗಾ ವಿ.ವಿ.ಯಿಂದ ಎಂ.ಎ. ಬಿ.ಇಡಿ, ಹಾಗೂ  ಹಂಪಿಯ ಕನ್ನಡ ವಿ.ವಿ.ಯಿಂದ ಪಿಎಚ್ ಡಿ (ಕಾರಂತರ ಕಾದಂಬರಿಗಳ ಸ್ತ್ರೀಪ್ರಪಂಚ) ಪದವೀಧರರು.  ಚಿತ್ತಾಪುರದ ಶ್ರೀ ಗಂಗಾ ಪರಮೇಶ್ವರಿ ಡಿ.ಎಡ್ ವಿದ್ಯಾಲಯದಲ್ಲಿ ಉಪನ್ಯಾಸಕರು. ನಂತರ 2009 ರಿಂದ ಕಲಬುರಗಿಯ ನೂತನ ಪದವಿ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರು. ರಾವೂರು ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಚಿತ್ತಾಪುರ ತಾಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಚಿತ್ತಾಪುರ ತಾಲೂಕು ಘಟಕ ಅಧ್ಯಕ್ಷರು, ಕನ್ನಡ ...

READ MORE

Related Books