ದಾರ್ಶನಿಕ ಕವಿ ಕನಕದಾಸರು

Author : ಚಂದ್ರಕಾಂತ ಬಿಜ್ಜರಗಿ

Pages 429

₹ 350.00




Year of Publication: 2010
Published by: ಶೈಲಚಂದ್ರ ಪ್ರಕಾಶನ
Address: ದರ್ಗಾ, ಸೆಂಟ್ರಲ್‌ ಜೈಲ್ ಹತ್ತಿರ, ವಿಜಯಪುರ 586103
Phone: 9448336151

Synopsys

ಕನಕದಾಸರ ಕುರಿತ ಚಾರಿತ್ರಿಕ ಮಾಹಿತಿ ನೀಡುವ ಕೃತಿ. ಕನಕದಾಸರಿಗೆ ಶ್ರಿಕೃಷ್ಣ ಮಂದಿರದಲ್ಲಿ ಪ್ರವೇಶ ನೀಡಲಿಲ್ಲ. ಕನಕದಾಸರು ಭಕ್ತಿಯಿಂದ ಶ್ರೀಕೃಷ್ಣನ ಮಂದಿರ ಹಿಂದೆ ನಿಂತು ರಾತ್ರಿಯಿಡೀ ಭಕ್ತಿಯಿಂದ ಕೀರ್ತನೆಗಳನ್ನು ಹಾಡಿದಾಗ ಆತನ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣ ಮಂದಿರ ಗೊಡೆ ಒಡೆದು ಕನಕದಾಸನಿಗೆ ದರ್ಶನವಿತ್ತ ಎಂಬ ಕಾಲ್ಪನಿಕ ಕಥೆಯನ್ನು ಹುಟ್ಟು ಹಾಕಿದವರು ಉಡುಪಿ ಕೃಷ್ಣ ಮಠದವರು ಎನ್ನುವ ಲೇಖಕರು ತಮ್ಮ ವಾದಕ್ಕೆ ಆಧಾರ ನೀಡಿರುವುದಾಗಿ ತಿಳಿಸಿರುತ್ತಾರೆ. ಕನಕದಾಸರು ಬೇಡ, ಬಣಜಿಗ ಕುಲದವರಾಗಿರದೆ ಕುರುಬ ಜಾತಿಗೆ ಸೇರಿದವರು ಎಂದು ಅವರು ಪ್ರತಿಪಾದಿಸುತ್ತಾರೆ. ಅದಕ್ಕೆ ಪೂರಕ ಮಾಹಿತಿ ಈ ಕೃತಿಯಲ್ಲಿದೆ ಎಂದು ಲೇಖಕರು ತಿಳಿಸುತ್ತಾರೆ.

About the Author

ಚಂದ್ರಕಾಂತ ಬಿಜ್ಜರಗಿ
(27 September 1949)

ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರಾಗಿರುವ ಚಂದ್ರಕಾಂತ ಬಿಜ್ಜರಗಿ ಅವರು ವಿದ್ಯುನ್ಮಾನ ವ್ಯವಹಾರ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಿವಾಸಿಗಳು. ವಿದ್ಯುನ್ಮಾನ ವಿಷಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಸಮ್ಮೋಹನ ಶಾಸ್ತ್ರದಲ್ಲಿ ಅವರಿಗೆ ವಿಶೇಷ ಆಸಕ್ತಿ. ಅವರು ’ಕುರುಬ ದರ್ಪಣ’ ವಾರಪತ್ರಿಕೆಯ ಸಂಪಾದಕರು.  ವಿಜಯಪುರ ಜಿಲ್ಲಾ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರು & ಹಾಲಿ ನಿರ್ದೇಶಕರು. ಕನಕದಾಸರ ಕುರಿತ ಸಾಕಷ್ಟು ಬಿಡಿ ಲೇಖನಗಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳು ಪ್ರಕಟಿಸಿದ ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ, ಕುರುಬರ ಹೆಜ್ಜೆಗಳು, ಜ್ಯೋರ್ತಿವಿಜ್ಞಾನ, ವಿಜಯನಗರ ಸಾಮ್ರಾಜ್ಯ, ...

READ MORE

Related Books