ದಾಸ ದರ್ಪಣ

Author : ಸಂಧ್ಯಾ ಹೊನಗುಂಟಿಕರ್

Pages 158

₹ 150.00




Year of Publication: 2017
Published by: ಕನ್ನಡ ಸಾಹಿತ್ಯ ಪರಿಷತ್ತು
Address: ದಕ್ಷಿಣ ವಿಧಾನಸಭಾ ಕ್ಷೇತ್ರ ಕಲಬುರಗಿ

Synopsys

ಲೇಖಕಿ ಸಂಧ್ಯಾ ಹೊನಗುಂಟಿಕರ್ ಅವರ ಸಂಪಾದಿತ ಕೃತಿ- ʼದಾಸ ದರ್ಪಣ. ಕಲಬುರಗಿ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಅಂಗವಾಗಿ  ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಿಧಾನಸಭಾ ಕ್ಷೇತ್ರ ಕಲಬುರಗಿ ಹಾಗೂ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಈ ಕೃತಿ ಪ್ರಕಟಿಸಿವೆ. ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಅವರು ಪ್ರಧಾನ ಸಂಪಾದಕರು. 

ಆಧ್ಯಾತ್ಮವಾದರೂ ಅದನ್ನೂ ಸಾಧಿಸಿಕೊಳ್ಳಲು ಬದುಕಿನೊಂದಿಗೆ ಮುಖಾಮುಖಿಯಾಗಿಸುವ ಮಾರ್ಗವನ್ನು ಇಲ್ಲಿ ಬೋಧಿಸಿದ್ದಾರೆ. ಲೌಕಿಕದ ಮೂಲಕ ಅಲೌಕಿಕದತ್ತ ಸಾಗಲು ಸುಲಭ ಸಾಧ್ಯವಾದ ದಾರಿ ತೋರಿದ್ದಾರೆ. ಈಸಬೇಕು ಇದ್ದು ಜೈಸಬೇಕು ಎಂಬ ಛಲದ ನಡೆಯನ್ನು‘ ಇಟ್ಟಾಂಗ್ಹ ಇರುವೆನೂ ಹರಿಯೆ’ ಎಂದು ಬದುಕು ಬಂದಂತೆ ಸ್ವೀಕರಿಸುವ ಸಕಾರಾತ್ಮಕ ಚಿಂತನೆಯನ್ನೂ ರೂಢಿಸಿಕೊಳ್ಳಲು ಹೇಳಿದ್ದಾರೆ. ದಾಸ ದರ್ಪಣ ಕೃತಿಯು ದಾಸ ಸಾಹಿತ್ಯದಲ್ಲಿಯ ದೇಹ ವಿಜ್ಞಾನ, ಸಂಗೀತ, ಸಾಮಾಜಿಕ ನ್ಯಾಯ, ಭಾವ ಸಂಬಂಧ, ಲೋಕನೀತಿಯಂತಹ ವಿಷಯವನ್ನೊಳಗೊಂಡಂತೆ ಉತ್ತಮ ಮಾಧ್ಯಮವಾಗಿ ಹೇಗೆ ಸಂವಹನ ಕ್ರಿಯೆಯಲ್ಲಿ ದಾಸ ಸಾಹಿತ್ಯ ಜನಮಾನಸವನ್ನು ತಲುಪಿದ ಬಗೆ, ಮತೀಯ ಪ್ರಜ್ಞೆ, ದಲಿತಾನುಕಂಪ ಇತ್ಯಾದಿ ದಾಸರು ತಮ್ಮ ಕೀರ್ತನೆಗಳ ಮೂಲಕ ಹೇಗೆ ಪ್ರತಿಪಾದಿಸಿದ್ದಾರೆ ಎಂಬ ಚಿಂತನೆಯ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ. 

About the Author

ಸಂಧ್ಯಾ ಹೊನಗುಂಟಿಕರ್

ಸಂಧ್ಯಾ ಹೊನಗುಂಟಿಕರ್ ಅವರು ಜನಿಸಿದ್ದು 1964 ಅಕ್ಟೋಬರ್ 23, ಗುಲಬರ್ಗಾದಲ್ಲಿ. ತಂದೆ - ವಾಸುದೇವರಾವ್ ಕುಲಕರ್ಣಿ, ತಾಯಿ- ಸರೋಜಾಬಾಯಿ ಕುಲಕರ್ಣಿ. ಬಾಲ್ಯ ಕಳೆದಿದ್ದು ಮತ್ತು ವಿದ್ಯಾಭ್ಯಾಸ ಮಾಡಿದ್ದು ಯಾದಗಿರಿಯಲ್ಲಿ. ಎಂ.ಎ. (ಕನ್ನಡ) ಪದವೀಧರೆ ಆಗಿರುವ ಅವರಿಗೆ ಸಮಾಜ ಸೇವೆ, ಅಭಿನಯ ಆಸಕ್ತಿಯ ಕ್ಷೇತ್ರಗಳು. ಕಡಲ ಒಡಲು ಬಗೆದಷ್ಟು (2002), ಹರಿದ ಹಾಸಿಗೆ ಹಂಬಲ (2008), ಹಾರಲಾಗದ ನೊಣ, (ಕತೆಯ ಸಂಕಲನಗಳು) ಯಶಸ್ವಿ ಬದುಕಿಗೆ ಮೆಟ್ಟಿಲು (ಶರಣರ ಹದಿನೈದು ಕತೆಗಳು) (ಮಕ್ಕಳ ಕಥಾ ಸಂಕಲನ) (2009), ಸೂರ್ಯ ಮುಖಿ (ಪ್ರಬಂಧಗಳು) ಸಖಿ ಶಕ್ತಿ (40 ವರುಷ ಸಮಾಜಮುಖಿ ಕೆಲಸದಲ್ಲಿರುವ ಸಂ. ಮ. ಮಂ.ದ ಪರಿಚಯಾತ್ಮಕ ...

READ MORE

Related Books