ದಶವಾರ್ಷಿಕ ವಿಮರ್ಶೆಗಳು 1974-83

Author : ಗಿರಡ್ಡಿ ಗೋವಿಂದರಾಜ

Pages 368

₹ 16.00




Year of Publication: 1986
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: #14/3, ನೃಪತುಂಗ ರೋಡ್, ಬೆಂಗಳೂರು -560002,

Synopsys

‘ದಶವಾರ್ಷಿಕ ವಿಮರ್ಶೆಗಳು 1974-83’  ಕೆ.ಎಸ್. ನಿಸಾರ್ ಅಹಮದ್ ಪ್ರಧಾನ ಸಂಪಾದಕತ್ವದಲ್ಲಿ ಸಂಪಾದಿಸಿದ ಕೃತಿಯಾಗಿದೆ. ಪ್ರೊ. ಎಲ್.ಎಸ್. ಶೇಷಗಿರಿರಾವ್ , ಗಿರಡ್ಡಿ ಗೋವಿಂದರಾಜ, ಕೆ.ವಿ. ನಾರಾಯಣ ಅವರು ಕೃತಿಯ ಸಂಪಾದಕರು. ಈ ಕೃತಿಯು ರಸ ಪ್ರತಿಪಾದನೆ (ಕೆ. ಕೃಷ್ಣಮೂರ್ತಿ), ಕಲೆ ಹಾಗೂ ಅನುಕೃತಿ ( ವಿ. ಕೃ. ಗೋಕಾಕ), ಕವಿ ಕಾವ್ಯಾಕರ್ಷಣೆ (ಪು.ತಿ. ನರಸಿಂಹಾಚಾರ್ ), ಸಾಹಿತ್ಯದಲ್ಲಿ ಸಂಪ್ರದಾಯ, ಹೊಸಮಾರ್ಗ ಮತ್ತು ಸಾಹಿತ್ಯನಿರ್ಮಿತಿ (ಗಿರಡ್ಡಿ ಗೋವಿಂದರಾಜ), ಸಾಹಿತ್ಯ ಮತ್ತು ಸಾಮಾಜಿಕ ಪ್ರಜ್ಞೆ (ಯಶವಂತ ಚಿತ್ತಾಲ), ಸಾಹಿತ್ಯದಲ್ಲಿ ತಂತ್ರ (ಎಲ್.ಎಸ್. ಶೇಷಗಿರಿರಾವ್), ಕಾದಂಬರಿ ಮತ್ತು ಹೊಸ ನೈತಿಕ ಪ್ರಜ್ಞೆ( ಯು. ಆರ್. ಅನಂತಮೂರ್ತಿ), ಛಂದಸ್ಸಿನ ಅಭ್ಯಾಸ-ಬೇಂದ್ರೆಯವರ ಕಾವ್ಯದ ಸ್ಥೂಲ ಹಿನ್ನೆಲೆಯಲ್ಲಿ (ಎಚ್. ಎಸ್.ರಾಘವೇಂದ್ರರಾವ್), ಶೈಲಿಶಾಸ್ತ್ರದ ರೂಪರೇಖೆಗಳು (ಕೆ.ವಿ. ತಿರುಮಲೇಶ್), ಸಾಹಿತ್ಯದಲ್ಲಿ ಶೈಲಿ (ಡಿ.ಎ.ಶಂಕರ್), ಕನ್ನಡ ಸಾಹಿತ್ಯದ ಮುಖ್ಯ ಪ್ರೇರಣೆಗಳು (ಜಿ.ಎಸ್. ಶಿವರುದ್ರಪ್ಪ), ನಮ್ಮ ಸಾಹಿತ್ಯದಲ್ಲಿ ಭಾರತೀಯತೆ ( ಎ.ಎನ್. ಮೂರ್ತಿರಾವ್), ಅನ್ಯದೇಶೀಯ ಸಾಹಿತ್ಯಿಕ ಹಾಗೂ ತಾತ್ವಿಕ ಪ್ರಭಾವಗಳು (ಶಾಂತಿನಾಥ ದೇಸಾಯಿ), ನವೋದಯ ಕಾವ್ಯದ ಭಾಷೆ ಮತ್ತು ಆಲೋಚನೆ ( ಕೃಷ್ಣ ಪರಮೇಶ್ವರ ಭಟ್ಟ), ಈಚಿನ ಕನ್ನಡ ಕಾವ್ಯ (ಡಿ.ಆರ್. ನಾಗರಾಜ್), ಇತ್ತೀಚಿನ ಕನ್ನಡ ಸಾಹಿತ್ಯ ವಿಮರ್ಶೆ : ಅನ್ಯ ಪ್ರಭಾವಗಳು, ಸಾಧನೆಗಳು (ಕೆ.ವಿ. ನಾರಾಯಣ), ಬಂಡಾಯ ಸಾಹಿತ್ಯ ಚಳವಳಿ: ಒಂದು ಚಿಂತನೆ ( ಬರಗೂರು ರಾಮಚಂದ್ರಪ್ಪ), ಬಂಡಾಯ ಸಾಹಿತ್ಯ: ಒಂದು ಪೂರ್ವಪೀಠಿಕೆ, ಪಂಪನ ಕವಿತೆ : ಅನುಸಂಧಾನಕ್ಕೆ ಹೊಸ ಮಾರ್ಗ ( ಕೆ.ವಿ ಸುಬ್ಭಣ್ಣ), ಬಸವಣ್ಣ ಮತ್ತು ವಚನ ಸಾಹಿತ್ಯ( ಬಿ. ದಾಮೋದರ ರಾವ್), ಅಕ್ಕಮಹದೇವಿಯ ವಚನಗಳ ಪ್ರತಿಮಾವಿಧಾನ ( ಎಚ್.ಎಂ.ಚನ್ನಯ್ಯ), ಕಾರ್ನಾಡರ ತುಘುಲಕ್: ವಸ್ತು ವಿಶ್ಲೇಷಣೆ ( ಜಿ.ಎಚ್. ನಾಯಕ), ಪೌರಾಣಿಕತೆ ಕಳಚಿಕೊಂಡ ಪರ್ವ ( ಕೀರ್ತಿನಾಥ ಕುರ್ತಕೋಟಿ), ದೇವನೂರ ಮಹಾದೇವ ಅವರ ಕತೆಗಳು ( ಟಿ.ಪಿ ಅಶೋಕ) ಇವೆಲ್ಲವನ್ನು ಒಳಗೊಂಡಿದೆ.

About the Author

ಗಿರಡ್ಡಿ ಗೋವಿಂದರಾಜ
(22 September 1939 - 11 May 2018)

ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಮೂಲತಃ ಧಾರವಾಡ ಜಿಲ್ಲೆಯ ಅಬ್ಬಿಗೇರಿಯವರು. ತಂದೆ ಅಂದಾನಪ್ಪ ಮತ್ತು ತಾಯಿ ನಾಗಮ್ಮ. ಕನ್ನಡ ಮತ್ತು ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಸಣ್ಣಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್, ಬೆಲ್ಸಿಯಂ, ಫ್ರಾನ್ಸ್, ಸರೆಂಡ್, ಇಟಲಿಗಳಲ್ಲಿ ಉಪನ್ಯಾಸ ನೀಡಿರುವ ಅವರು ಇಂಗ್ಲಿಷ್‌ ಸ್ಟಡೀಸ್ ನಲ್ಲಿ ಡಿಪ್ಲಮೊ ಪಡೆದು ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನ ಪಡೆದು  ಇಂಗ್ಲೆಂಡಿಗೆ ಭಾಷಾ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ನಡೆಸಿದರು. ಅವರು ಹೈಸ್ಕೂಲಿನಲ್ಲಿರುವಾಗಲೇ 'ಶಾರದಾಲಹರಿ' ಎಂಬ ನೀಳ್ಗವಿತೆ ಪ್ರಕಟಿಸಿದ್ದರು. ನಾಟಕ ಅಕಾಡೆಮಿಯ ಫೆಲೋಶಿಪ್ ದೊರೆತಿರುವ ...

READ MORE

Related Books