ದಶಲಕ್ಷಣಧರ್ಮಗಳು

Author : ಎರ್ತೂರು ಶಾಂತಿರಾಜಶಾಸ್ತ್ರಿ

Pages 40

₹ 109.00




Year of Publication: 2020
Published by: ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್
Address: ಜಯನಗರ, ಬೆಂಗಳೂರು- 560070

Synopsys

‘ದಶಲಕ್ಷಣಧರ್ಮಗಳು’ ಎರ್ತೂರು ಶಾಂತಿರಾಜಶಾಸ್ತ್ರಿ ಅವರ ಕೃತಿ. ಉತ್ತರ ಭಾರತದ ಜೈನ ಸಮಾಜದಲ್ಲಿ ದಶಲಕ್ಷಣಧರ್ಮದ ವ್ರತಾಚರಣೆಯು ವ್ರತನಿಯಮಾನುಷ್ಠಾನಗಳೆಲ್ಲೆಲ್ಲ ಬಹು ಮುಖ್ಯವಾಗಿ ಪರಿಗಣಿಸಲ್ಪಟ್ಟಿದೆ. ಈ ಪರಿಗಣನೆಯು ಉಚಿತವಾಗಿ ಇರುವುದಾದರೂ ದಕ್ಷಿಣ ಭಾರತದ ಜೈನಸಮಾಜದಲ್ಲಿ ಈ ವ್ರತಾಚರಣೆಯು ಸಾರ್ವತ್ರಿಕವಾಗಿ ಪ್ರಚಾರದಲ್ಲಿ ಬಾರದಿರಲು ಕಾರಣವೇನೋ ತಿಳಿಯದು. ಅಂತು ಸರ್ವತ್ರ ಈ ವ್ರತಾಚರಣೆಯು ಪ್ರಚಾರದಲ್ಲಿ ಬರುವುದಕ್ಕೆ ತಕ್ಕುದೆಂಬುದು ಈ ಧರ್ಮದ ಮುಂದಿನ ಮಹತ್ತ್ವವರ್ಣನೆಯಿಂದ ವಾಚಕರಿಗೆ ಗೊತ್ತಾಗಬಹುದು. ಮೊದಲು ನಾವು ಧರ್ಮ ಶಬ್ದದ ವಾಚ್ಯವನ್ನು ಎಂದರೆ ಅರ್ಥವನ್ನು ವಾಚಕರ ಲಕ್ಷ್ಯಕ್ಕೆ ತರುವೆವು. ಧರ್ಮವೆಂದರೆ ಧಾರಣಮಾಡುವುದು ಎತ್ತಿಹಿಡಿಯುವುದು ಎಂದರ್ಥ. ಸಾಮಾನ್ಯವಾಗಿ ವಸ್ತುವಿನ ಸ್ವಾಭಾವಿಕವಾದ ಗುಣಕ್ಕೆ ಧರ್ಮವೆಂದು ಹೆಸರಿರುವುದು. ಉದಾಹರಣೆ-ಬೆಂಕಿಯಲ್ಲಿ ಉಷ್ಣತೆ, ನೀರಿನಲ್ಲಿ ಸ್ವಚ್ಛತೆ, ಶೈತ್ಯ, ಜೀವದಲ್ಲಿ ಜ್ಞಾನ ಸುಖ ಇತ್ಯಾದಿ. ಈ ಧರ್ಮಗಳು ಆಯಾ ಪದಾರ್ಥಗಳನ್ನು ಎತ್ತಿಹಿಡಿಯುರುದೆಂದರೆ ಹೇಗೆ, ಎಂಬ ಪ್ರಶ್ನೆಗೆ, ಇತರ ಪದಾರ್ಥಗಳಿಂದ ಆಯಾ ಪದಾರ್ಥಗಳನ್ನು ಪ್ರತ್ಯೇಕಿಸುವುದು ಅಥವಾ ಒಂದು ಪದಾರ್ಥವು ಮತ್ತೊಂದು ಪದಾರ್ಥವಾಗದಂತೆ ಕಾಪಾಡುವುದು ಎಂದರ್ಥ. ಧರ್ಮವು ಯಾವ ಪದಾರ್ಥದಲ್ಲಿದೆಯೋ ಆ ಪದಾರ್ಥಕ್ಕೆ ಧರ್ಮಿಯೆಂದು ಹೆಸರು. ಒಂದು ವಸ್ತುವಿನಲ್ಲಿ ನಿಯತವಾಗಿರುವ ಧರ್ಮವು ಇತರ ವಸ್ತುವಿನ ಸಂಬಂಧದಿಂದ ವಿಕಾರವನ್ನು ಹೊಂದಿದರೆ ಅದಕ್ಕೆ ಅಧರ್ಮವೆಂದು ಹೆಸರು. ಆ ಧರ್ಮಪಾಲನೆಗೆ ಬೇಕಾಗುವ ದಶಲಕ್ಷಣಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ.

About the Author

ಎರ್ತೂರು ಶಾಂತಿರಾಜಶಾಸ್ತ್ರಿ

ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಜೈನಕಾಶಿ ಮೂಡುಬಿದರೆ ಬಳಿಯ ಎರ್ತೂರು ಎಂಬ ಸಣ್ಣ ಹಳ್ಳಿಯವರು. ಸಾಧಾರಣ ರೈತ ಕುಟುಂಬದಲ್ಲಿ 1888ರಲ್ಲಿ ಜನಿಸಿದರು. ತಂದೆ- ಧರಣಪ್ಪಾರ್ಯ ಮತ್ತು ತಾಯಿ- ಚೆಲುವಮ್ಮ. ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಸುತ್ತಮುತ್ತಲಿನ ಪ್ರೀತಿಯ ತೊಟ್ಟಿಲಲ್ಲಿ ಬೆಳೆದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸವೆಲ್ಲ ಎರ್ತೂರು ಮತ್ತು ಕಾರ್ಕಳದಲ್ಲಿ ನಡೆದವು. ಪೂರ್ವಾಶ್ರಮದಲ್ಲಿ ಅವರ ಅಜ್ಜ (ತಾಯಿಯ ತಂದೆ) ನವರಾಗಿದ್ದ ಆದಿಸಾಗರ(ಆದಿರಾಜಯ್ಯ) ಮುನಿಗಳು, ಕಾರ್ಕಳದ ಅಂದಿನ ಶ್ರೀಗಳು ಮತ್ತು ಶ್ರವಣಬೆಳಗೊಳದ ಸ್ವಸ್ತಿಶ್ರೀ ನೇಮಿಸಾಗರ ವರ್ಣಿಯವರ ಮಹದಾಶೀರ್ವಾದ ಮತ್ತು ಮಾರ್ಗದರ್ಶನದ ಫಲವಾಗಿ ವಿದ್ಯಾಭ್ಯಾಸವು ...

READ MORE

Related Books