`ಡೆಡ್ ಲೈನ್ ಕತೆಗಳು' ಕೃತಿಯು ಸಂಜಯ್ ಚಿತ್ರದುರ್ಗ ಅವರ ಕಥಾ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಜಯರಾಮಚಾರಿ ಅವರು ಹೀಗೆ ಹೇಳಿದ್ದಾರೆ; ಇಲ್ಲಿ ಕಥೆಗಾರ ತನ್ನ ಜೀವನಾನುಭವಕ್ಕೆ ಎಟುಕಿದಷ್ಟು ಭಾಷೆಯನ್ನು ಅತಿ ನಾಜೂಕಾಗಿ, ಅಷ್ಟೇ ಚುರುಕಾಗಿಯೂ ಬಳಸಿದ್ದಾನೆ. ‘ದ್ಯಾಮಜ್ಜಿ ಪುರಾಣ’, ‘ಗುಲ್ಕಮ್ಮ’ ನೀರಿಲ್ಲದ ನದಿಯ ಊರಿನಿಂದ ನಡೆದು ಬಂದವರು, ‘ಕಲರ್ ಕಲರ್ ಬಲೂನ್’, ‘ಉದ್ದದ ಸೇತುವೆ’, ಕತೆಗಳಲ್ಲಿ ಸ್ಪಷ್ಟವಾಗಿ ನೇರವಾಗಿ ಎಲ್ಲ ಕಾಲಕ್ಕೂ ಸಲ್ಲುವ ಕಥೆಗಾರನಾಗಿ ಸಂಜಯ್ ಕಾಣಿಸಿಕೊಳ್ಳುತ್ತಾನೆ. ಸಂಜಯನ ಎಷ್ಟೋ ಕತೆಗಳು ಪದಮಿತಿಗೆ, ಡೆಡ್ ಲೈನ್ ಇಟ್ಟುಕೊಂಡು ಸ್ಪರ್ಧೆಗಾಗಿ ಬರೆದ ಕತೆಗಳೇ ಆಗಿವೆ. ಹಾಗಾಗಿ ಕೆಲವು ಮಾದರಿಗೆ, ಇಂತಹ ಪತ್ರಿಕೆಗಳಿಗೆ ಇಂಥ ಕಥಾವಸ್ತು ಇದ್ರೆ ಗೆಲ್ಲುವುದು ಎಂಬ ಸಹಜ ಆಸೆಯಿಂದ ಕಟ್ಟಿದ ಕತೆಗಳಿವು.
ಸಂಜಯ್ ಚಿತ್ರದುರ್ಗ ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕೊಬನಹಳ್ಳಿಯವರು. ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಶಿಕ್ಷಣ. ಮುಖ್ಯವಾಗಿ ಸಮಕಾಲೀನ ಕನ್ನಡ ಸಾಹಿತ್ಯದ ಓದು ಹಾಗೂ ಹೊಸ ಕಾಲದ ಸಿನಿಮಾ ವೀಕ್ಷಣೆ ಅವರ ಹವ್ಯಾಸ. ಬರವಣಿಗೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರ ಬರಹಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಅಲೆಮಾರಿ ಸಂತ’ ಬ್ಲಾಗ್ ನಲ್ಲಿ ತಮ್ಮ ಬರಹಗಳನ್ನು ಪ್ರಕಟಿಸುತ್ತಾರೆ. ಕೃತಿಗಳು: ಡೆಡ್ ಲೈನ್ ಕತೆಗಳು ...
READ MORE