ಡಿಸೆಂಬರ್ 13

Author : ಸುಕನ್ಯಾ ಕನಾರಳ್ಳಿ

Pages 208

₹ 150.00




Year of Publication: 2007
Published by: ಲಂಕೇಶ ಪ್ರಕಾಶನ
Address: # ಲಂಕೇಶ್ ಪತ್ರಿಕೆ, ಬಸವನಗುಡಿ, ಬೆಂಗಳೂರು

Synopsys

`ಭಾರತೀಯ ಪಾರ್ಲಿಮೆಂಟಿನ ಮೇಲೆ ದಾಳಿ ಎಂಬ ವಿಚಿತ್ರ ಪ್ರಕರಣ' ಎಂಬ ಉಪಶೀರ್ಷಿಕೆಯಡಿ ಆರುಂಧತಿ ರಾಯ್ ಹಾಗೂ ಇತರರು ಇಂಗ್ಲಿಷಿನಲ್ಲಿ ಬರೆದ ‘December-13' ಕೃತಿಯನ್ನು ಸುಕನ್ಯಾ ಕನಾರಳ್ಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಜಾಸತ್ತಾತ್ಮಕ ದೇಶದ ಲೋಕಸಭೆಯ ಮೇಲಿನ ದಾಳಿ ಪ್ರಜಾಸತ್ತೆಯ ಮೇಲಿನ ದಾಳಿ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಈ ದಾಳಿಕೋರರು ಸರ್ವಾಧಿಕಾರ ಸ್ಥಾಪಿಸುವ, ಜನವಿರೋಧಿ ಸತ್ತೆಯನ್ನು ಸ್ಥಾಪಿಸುವ ಹುನ್ನಾರದವರು. ಕೋಮುವಾದ ಹೆಚ್ಚಲು ಅದಕ್ಕೆ ಪ್ರತಿಕ್ರಿಯೆಯಾಗಿಯೂ ಈ ದಾಳಿ ನಡೆದಿದೆ ಎಂಬ ಪ್ರತಿಕ್ರಿಯೆಗಳೂ ಇವೆ. ಸೌಹಾರ್ದ-ಸಹಕಾರದ ಬಾಳ್ವೆಗೆ ಉಸಿರಾಗಿದ್ದ ಭಾರತದ ಸಂವಿಧಾನವನ್ನು ಸಹಿಸದ ಕೋಮುವಾದಿಗಳಾದ ಉಗ್ರರು ನಡೆಸಿದ ಪೈಶಾಚಿಕ ಕೃತ್ಯ ಎಂದು ಎಲ್ಲೆಡೆ ಖಂಡನೆ ವ್ಯಕ್ತವಾಗಿದ್ದು, ಅದಕ್ಕೆ ಪೂರಕವಾಗಿ ಇಲ್ಲಿಯ ಬರಹಗಳಿವೆ.

About the Author

ಸುಕನ್ಯಾ ಕನಾರಳ್ಳಿ

ಕೊಡಗಿನಲ್ಲಿ ಜನಿಸಿದ ಸುಕನ್ಯಾ ಅವರು ವಿಜ್ಞಾನದಲ್ಲಿ ಪದವಿ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಎಂ.ಫಿಲ್ ಪಡೆದಿದ್ದಾರೆ. ಅನುವಾದ, ಮಹಿಳಾ ಸಾಹಿತ್ಯ, ಸಂಶೋಧನೆಯಲ್ಲಿ ಆಸಕ್ತಿ. ’ಅಲ್ಲಿಂದ ಇಲ್ಲಿಗೇ ಅವಳ ಕಥೆಗಳು’, ಅರುಂಧತಿ ರಾಯ್ ಅವರ ’ಡಿಸೆಂಬರ್‍ 13’, ಮಿಡತೆಗಳ ಬರವಿಗೆ ಕಿವಿಗೊಡುತ್ತಾ’ ಜೊತೆಗೆ ಮಿಲನ್ ಕುಂದೇರಾನ ಕಾದಂಬರಿ ’ಹೊರಲಾರದ ಗಾಳಿ ಭಾರ’ ಕನಾರಳ್ಳಿ ಅವರು ಅನುವಾದಿಸಿದ ಕೃತಿಗಳು. ವೈದೇಹಿ ಅವರ ಆಯ್ದ ಕತೆಗಳ ಇಂಗ್ಲಿಷ್ ಅನುವಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಕನಾರಳ್ಳಿಯವರ ಹಲವು ಕಥೆ, ಅನುವಾದ, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ನ್ಯೂಜಿಲೆಂಡ್ ನಲ್ಲಿ ಇಂಗ್ಲಿಷ್ ಅಧ್ಯಾಪಿಕೆಯಾಗಿದ್ದಾರೆ. ...

READ MORE

Related Books