ದೀಪಮಾಲೆ

Author : ಸಿದ್ದವನಹಳ್ಳಿ ಕೃಷ್ಣಶರ್ಮ

Pages 148




Year of Publication: 1943
Published by: ಸಿದ್ಧವನಹಳ್ಳಿ ಕೃಷ್ಣಶರ್ಮ
Address: ಬೆಂಗಳೂರು

Synopsys

ದೀಪಮಾಲೆ-ಸಿದ್ಧವನಹಳ್ಳಿ ಕೃಷ್ಣಶರ್ಮ ಅವರ ಕೃತಿ. 1922 ರಲ್ಲಿ ಮೊದಲ ಮುದ್ರಣ ಕಂಡಿತ್ತು. ಈಗಿನದು ದ್ವಿತೀಯ ಆವೃತ್ತಿ. ಸರೋಜಿನಿ ದೇವಿ, ಠಕ್ಕರ್ ಬಾಪಾ, ಆಚಾರ್ಯ ವಿನೋಬಾ, ಬಾರು ರಾಜಾರಾವ್, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಜಮನಾಲಾಲ್ ಬಜಾಜ್, ಜಯರಾಮ ದಾಸ್ ದೌಲತ್ ರಾಂ, ರಾಜೇಂದ್ರ ಪ್ರಸಾದ, ಶರತ್ ಚಂದ್ರ ಭೋಸ್ ಸೇರಿದಂತೆ ವಿವಿಧ ಗಣ್ಯರ ವ್ಯಕ್ತಿಚಿತ್ರಗಳನ್ನು ಈ ಕೃತಿ ಒಳಗೊಂಡಿದೆ.

ಕೃತಿಗೆ ಮುನ್ನುಡಿ ಬರೆದ ರಂಗನಾಥ ದಿವಾಕರ ಅವರು ‘ ಇವು ವ್ಯಕ್ತಿಚಿತ್ರ ಮಾತ್ರವಲ್ಲ; ಶಬ್ದಚಿತ್ರಗಳು ಹಾಗೂ ಸ್ವಭಾವ ಚಿತ್ರಗಳೂ ಆಗಿವೆ. ಬರೆಹ ಶೈಲಿಯಲ್ಲಿ ಕುಣಿತವಿದೆ. ಚೆಲ್ಲಾಟವಿದೆ. ವಸ್ತು ವೈವಿಧ್ಯತೆ ಇದೆ. ಕೆಲವೇ ಶಬ್ದಗಳಲ್ಲಿ ಹೇಳುವ ಚಮತ್ಕಾರವಿದೆ. ಅಂತರಂಗವನ್ನೂ ವರ್ಣಿಸಬಲ್ಲಷ್ಟು ಸಾಮರ್ಥ್ಯವಿದೆ’ ಎಂದು ಪ್ರಶಂಸಿಸಿದ್ದಾರೆ.

About the Author

ಸಿದ್ದವನಹಳ್ಳಿ ಕೃಷ್ಣಶರ್ಮ
(31 July 1904 - 02 October 1973)

ಪ್ರಸಿದ್ಧ ಪತ್ರಿಕೋದ್ಯಮಿ, ಸಾಹಿತಿ, ಗಾಂಧೀವಾದಿ ಸಿದ್ದವನಹಳ್ಳಿ ಕೃಷ್ಣಶರ್ಮ ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯವರು. ಅವರು 1904 ಜುಲೈ 31ರಂದು ಜನಿಸಿದರು. ಚಿತ್ರದುರ್ಗ, ಮೈಸೂರುಗಳಲ್ಲಿ ಪ್ರಥಮ ಬಿ. ಎ. ತರಗತಿವರೆಗೆ ಓದಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವಕ್ಕೆ ಒಳಗಾಗಿ ಓದನ್ನು ಬಿಟ್ಟು ದೇಶ ಸೇವೆಗೆ ದುಮುಕಿದರು. ಜೊತೆಗೆ ಪತ್ರಿಕೋದ್ಯಮ, ಬರೆವಣಿಗೆ ಕೆಲಸವನ್ನೂ ನಡೆಸಿದರು. 1942ರ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ಶಿಕ್ಷೆಗೆ ಒಳಗಾಗಿದ್ದರು. ಕನ್ನಡ ಪತ್ರಿಕೋದ್ಯಮದ ಏಳ್ಗೆಗೆ ಶ್ರಮಿಸಿದವರಲ್ಲಿ ಸಿದ್ಧವನಹಳ್ಳಿ ಪ್ರಮುಖರು. ಕನ್ನಡದಲ್ಲಿ ’ಹರಿಜನ’ ಪತ್ರಿಕೆ ಪ್ರಕಟಿಸಿದ ಅವರು ’ವಿಶ್ವ ಕರ್ನಾಟಕ’ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿದ್ದರು. ಆ ಪತ್ರಿಕೆಯಲ್ಲಿ ...

READ MORE

Related Books