ದೀವಟಿಗೆಗಳು

Author : ಎಸ್‌.ಆರ್‌. ರಾಮಸ್ವಾಮಿ

₹ 120.00




Year of Publication: 1998
Published by: ಸಾಹಿತ್ಯ ಸಿಂಧು ಪ್ರಕಾಶನ
Address: ಬೆಂಗಳೂರು.

Synopsys

ʼದೀವಟಿಗೆಗಳುʼ ಹಿರಿಯ ಚಿಂತಕರ ಜೀವನಚರಿತ್ರೆ ಒಳಗೊಂಡ ಈ ಕೃತಿಯನ್ನು ಲೇಖಕ ಎಸ್.ಆರ್.‌ ರಾಮಸ್ವಾಮಿ ರಚಿಸಿದ್ದಾರೆ. ಹಿಂದಿನ ಪೀಳಿಗೆಯಲ್ಲಿ ಕನ್ನಡನಾಡಿನ ಸಾರಸ್ವತ-ಸಾಂಸ್ಕೃತಿಕ-ಸಾಮಾಜಿಕ ಜೀವನವನ್ನು ಶ್ರೀಮಂತಗೊಳಿಸಿದ ಹಲವರು ಮಹನೀಯರ ವ್ಯಕ್ತಿಚಿತ್ರಣಗಳ ಸಂಕಲನವೇ – ’ದೀವಟಿಗೆಗಳು’. ಡಿ.ವಿ.ಜಿ., ವಿ.ಸೀ., ರಾಳ್ಳಪಲ್ಲಿ ಅನಂತಕೃಷ್ಣಶರ್ಮ, ವೀರಕೇಸರಿ ಸೀತಾರಾಮಶಾಸ್ತ್ರೀ, ಪ್ರೊ. ಎಸ್. ಶ್ರೀಕಂಠಶಾಸ್ತ್ರೀ, ಮೋಟಗಾನಹಳ್ಳಿ ಪಂಡಿತಸಂಕುಲ, ಎನ್. ಚೆನ್ನಕೇಶವಯ್ಯ, ಯಾದವರಾವ್ ಜೋಶಿ, ಪಿ. ಕೋದಂಡರಾವ್ – ಈ ಮಹನೀಯರನ್ನು ಕುರಿತ ಪ್ರಬಂಧಗಳು ಇಲ್ಲಿವೆ. ಈ ಹಲವಾರು ವ್ಯಕ್ತಿಗಳ ನಿಕಟ ಪರಿಚಯ-ಸಂಪರ್ಕವನ್ನು ಪಡೆದಿರುವ ಎಸ್.ಆರ್. ರಾಮಸ್ವಾಮಿ ಅವರು ವಾಸ್ತವ ಜೀವನ ಘಟನೆಗಳ ಸ್ಮರಣೆಯನ್ನು ಇಲ್ಲಿ ಸೂತ್ರವಾಗಿ ಒಳಸಿಕೊಂಡು ಈ ಪ್ರಬಂಧಗಳಲ್ಲಿ ಬಳಸಿದ್ದಾರೆ. ಇದುವರೆಗೆ ಬೆಳಕು ಕಾಣದಿರುವ ಹಲವಾರು ಘಟನೆಗಳು ಮೊದಲ ಬಾರಿಗೆ ಇಲ್ಲಿ ದಾಖಲೆಗೊಂಡಿವೆ.

About the Author

ಎಸ್‌.ಆರ್‌. ರಾಮಸ್ವಾಮಿ

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...

READ MORE

Related Books