ದಿಲ್ಲಿಯಿಂದ ತಾಮ್ಡೀ ಸುರ್ಲಾಗೆ

Author : ಆಗುಂಬೆ ಎಸ್. ನಟರಾಜ್‌

Pages 124

₹ 100.00




Year of Publication: 2012
Published by: ಹಂಸ ಪ್ರಕಾಶನ
Address: 947, 3ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು- 560040
Phone: 08023383004

Synopsys

ಆಗುಂಬೆ ಎಸ್. ನಟರಾಜ್ ಅವರ ಪ್ರವಾಸ ಸಾಹಿತ್ಯ ಕೃತಿ -ದಿಲ್ಲಿಯಿಂದ ತಾಮ್ಡೀ ಸುರ್ಲಾಗೆ. ಹಲವಾರು ಪ್ರವಾಸಿ ಕಥನಗಳನ್ನು ರಚಿಸಿರುವ ಆಗುಂಬೆ ನಟರಾಜ್ ಅವರು ಪ್ರವಾಸಿ ಕಥನದಲ್ಲೂ ವಿಭಿನ್ನ ಶೈಲಿಯ ಬರವಣಿಗೆಯಿಂದಾಗಿ ಓದುಗರನ್ನು ತಲುಪುತ್ತಾರೆ. ಈ ಕೃತಿಯಲ್ಲಿ ಇದು ದಿಲ್ಲಿ, ಮಹಾನ್ ಕಲಾವಿದನ ಮನೆ ಇಂದು ಹಾಳು ಮನೆ, ಮೈಸೂರಿನ ಸರ್ವಾಧಿಕಾರಿ, ಕೇರಳದ ಒಂದು ಐತಿಹಾಸಿಕ ಹಳ್ಳಿ, ಸಂತ ಜೇವಿಯರ್ ನ ಚರ್ಚ್, ರಾಮ ಕಾಮತಿ, ಮಿರ್ಜಾ ಗಾಲಿಬ್, ಕಮಲಾ ನೆಹರೂರವರ ಅನಾಥ ಮನೆ, ಪಾನೀಪತ್, ಹಸ್ತಿನಾಪುರ, ತಾನ್ ಸೇನ್, ಕಾಶಿಯ ಜಂಗಮಮಠ ಸೇರಿದಂತೆ ಹಲವು ವಿಭಿನ್ನ ಲೇಖನಗಳಿವೆ.

About the Author

ಆಗುಂಬೆ ಎಸ್. ನಟರಾಜ್‌
(20 November 1939)

ಲೇಖಕ ನಟರಾಜ್, 1939 ನವೆಂಬರ್‌ 20 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹುಟ್ಟಿದರು. ತಂದೆ ಎ. ಎಸ್. ಭಟ್, ತಾಯಿ ಲಕ್ಷ್ಮಮ್ಮ. ಕಾಲೇಜು ದಿನಗಳಿಂದಲೂ ಸಾಹಿತ್ಯದ ಬಗ್ಗೆ ಒಲವಿದ್ದು, ನಿವೃತ್ತಿಯ ನಂತರ ಈಗ ಪೂರ್ಣ ಪ್ರಮಾಣದ ಬರಹಗಾರರು. ಸದಾ ಒಂದಿಲ್ಲೊಂದು ಕಡೆ ಪ್ರವಾಸ ಅಥವಾ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗುತ್ತಾರೆ. ಅವರ ಪ್ರವಾಸಾನುಭವದ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಬಾತುಕೋಳಿ’ ಮತ್ತು ‘ಆತಂಕ’ ಎಂಬ ಎರಡು ಕಾದಂಬರಿಗಳು. ‘ಚಕ್ಕಂದ’ ಎಂಬ ಹನಿಗವನ ಸಂಕಲನ, ‘ರಸನಿಮಿಷ’ ಎಂಬ ಹಾಸ್ಯಕಥೆಗಳ ಸಂಗ್ರಹ. ‘ರಸ ವೈಚಾರಿಕತೆ’ ಎಂಬ ವೈಚಾರಿಕ ...

READ MORE

Related Books