ದೇವಕಾರು

Author : ಸತೀಶ್ ಚಪ್ಪರಿಕೆ

Pages 98

₹ 70.00




Year of Publication: 2010
Published by: ಅಂಕಿತ ಪುಸ್ತಕ
Address: #53, ಶ್ಯಾಮಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ, ಬಸವನಗುಡಿ, ಬೆಂಗಳೂರು-560004
Phone: 08026617100

Synopsys

ಜನಪರ ಪತ್ರಿಕೋದ್ಯಮದ ವಿವಿಧ ಮುಖಗಳನ್ನು ಅನಾವರಣ ಗೊಳಿಸುವ ಕೃತಿ ’ದೇವಕಾರು’. ಲೇಖಕರು-ಸತೀಶ್ ಚಪ್ಪರಿಕೆ. ಈಗಾಗಲೇ ಪ್ರಕಟಗೊಂಡಿರುವ ಈ ಎಲ್ಲ ಲೇಖನಗಳನ್ಳು ಕೃತಿಯ ಆಶಯಕ್ಕೆ ಅನುಗುಣವಾಗಿ ಪೂರಕವಾಗಿ ಹಿಗ್ಗಿಸಲಾಗಿದೆ. ಕೆಲ ಬದಲಾವಣೆಗಳೂ ಆಗಿವೆ ಎಂದು ಲೇಖಕರು ಹೇಳಿದ್ದಾರೆ.

ಭಾರತೀಯ ಮಾಧ್ಯಮ ವಲಯವು ಮಾನವೀಯ ಅಥವಾ ಜನಪರ ವರದಿಗಳಿಗೆ ಸೂಕ್ತ ಪ್ರಾಶಸ್ತ್ಯ ನೀಡುತ್ತಿಲ್ಲ ಎಂಬ ಕೊರಗು ಈ ಎಲ್ಲ ಲೇಖನಗಳ ಬರೆಹಕ್ಕೆ ಮೂಲ. ಪತ್ರಿಕೋದ್ಯಮ, ಪತ್ರಕರ್ತ ಯಾರಿಗಾಗಿ, ಅವರ ಸಾಮಾಜಿಕ ಹೊಣೆಗಾರಿಕೆಗಳೇನು ಎಂದು ಪ್ರಶ್ನಿಸುತ್ತಲೇ ಎಚ್ಚರಿಸುವ ಇಲ್ಲಿಯ ಬಹುತೇಕ ಲೇಖನಗಳು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಮಾಧ್ಯಮಕ್ಕೆ ಉತ್ತಮ ಮಾರ್ಗದರ್ಶಿಯಂತಿವೆ. ಪತ್ರಿಕೋದ್ಯಮ-ಪತ್ರಕರ್ತ ಯಾರಿಗಾಗಿ, ದೇವಕಾರು-ಒಂದು ಹಳ್ಳಿಯ ಕೊಲೆ, ವಿದರ್ಭಾ-ಕಲಾವತಿ ವಿಧವಾ ಪಡೆ, ಬಂಡ್ಲಪಲ್ಲಿ; ಅಲ್ಲೊಂದು ಲೋಕವುಂಟು, ಬಳ್ಳಾರಿ: ಧರೆ ಹೊತ್ತಿ ಉರಿದೊಡೆ, ವಾರಣಾಸಿ: ಗಂಗೆಯೊಡಲಿಗೆ ಬೆಂಕಿ, ದಾವಣಗೆರೆ: ತಾಹೀರ ಅಲಿ ಒಂದು ನೆನಪು, ಪುಲಕುಂಟ: ಪಾಪದ ಹೂಗಳ ಕೂಟ, ಉದಕಮಂಡಲ: ನೀಲಗಿರಿ ಸಾಮ್ರಾಟರ ಬದುಕು-ಬವಣೆ, ಚೋಂಡಿಮುಖೇಡ್: ರಾಜಕೀಯಕ್ಕೊಂದು ಸವಾಲು ಹೀಗೆ ಹತ್ತು ಲೇಖನಗಳು ತಮ್ಮಅಧ್ಯಯನಪೂರ್ಣ ಒಳ ನೋಟ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.

About the Author

ಸತೀಶ್ ಚಪ್ಪರಿಕೆ

ಪತ್ರಕರ್ತ, ಲೇಖಕ, ಕಾದಂಬರಿಕಾರ ಸತೀಶ್ ಚಪ್ಪರಿಕೆ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಚಪ್ಪರಿಕೆಯವರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು, ತಂದೆಯ ಹೋಟೆಲ್ ಉದ್ಯಮದಿಂದ ಬೆಂಗಳೂರಿಗೆ ಬಂದು ನೆಲಸಿದರು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ‘ಬ್ರಿಟಿಷ್  ಶಿವ್ನಿಂಗ್ ಸ್ಕಾಲರ್‌ಷಿಪ್’ ಪಡೆದ ಏಕೈಕ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ  ಸತೀಶ್ ಲಂಡನ್‌ನ ವೆಸ್ಟ್ ಮಿನಿಸ್ಟರ್  ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡಿದ್ದಾರೆ. ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೇವಲ ಬರವಣಿಗೆಯ ಶಕ್ತಿಯಿಂದಲೇ ‘ಪ್ರಜಾವಾಣಿ’ ದಿನಪತ್ರಿಕೆ ಸೇರಿ, ಅಲ್ಲಿ ಪತ್ರಕರ್ತ ಜೀವನ ಆರಂಭಿಸಿದ ಅವರು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ...

READ MORE

Related Books