ದೇವಕಿಯ ಚಿಂತನೆಗಳು

Author : ಕೆ.ಎಸ್‍. ನಾರಾಯಣಾಚಾರ್ಯ

Pages 344

₹ 350.00




Year of Publication: 2014
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ
Phone: 9448110034

Synopsys

ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರ ಕೃತಿ-ದೇವಕಿಯ ಚಿಂತನೆಗಳು. ಪುರಾಣದ ದೇವಕಿಯ 8ನೇ ಮಗು ಕೃಷ್ಣ. 7ನೇ ಮಗು ಬಲರಾಮ. ರಾಜ ಕಂಸನು ದೇವಕಿಯ ಮಕ್ಕಳಿಂದ ತನಗೆ ಜೀವಭಯ ಇದೆ ಎಂದು ತಿಳಿದು ಅವರನ್ನು ಹುಟ್ಟಿದ ತಕ್ಷಣ ಕೊಲ್ಲಲು ನಿರ್ಧರಿಸುತ್ತಾನೆ. ಹಾಗೆ ಆಗುತ್ತದೆ. ಆದರೆ, ತಂದೆ ವಸುದೇವ ಹಾಗೂ ತಾಯಿಯ ನಿರ್ಧಾರ ಹಾಗೂ ದೈವಬಲದೊಂದಿಗೆ 7ನೇ ಮಗು ಹಾಗೂ 8ನೇ ಮಗು ಕೃಷ್ಣ ಕಂಸನ ಕಣ್ಣು ತಪ್ಪಿಸಿ, ಹೊರಗಡೆ ಬೆಳೆಯುತ್ತಾರೆ. ಮುಂದೆ ಕೃಷ್ಣನು ಕಂಸನ ವಧೆ ಮಾಡುತ್ತಾನೆ. ಈ ಹಿನ್ನೆಲೆಯಲ್ಲಿ, ದೇವಕಿಯು ಒಬ್ಬ ತಾಯಿಯಾಗಿ ಅನುಭವಿಸುವ ನೋವು, ಯಾತನೆ, ಮಾತೃಧರ್ಮವನ್ನು ನಿರ್ವಹಿಸಿದ ರೀತಿ, ಉದಾತ್ತ ಚಿಂತನೆ ಇಂತಹ ಮೌಲ್ಯಗಳನ್ನು ಲೇಖಕರು ತಮ್ಮದೇ ಆದ ತೀಕ್ಷಣ ದೃಷ್ಟಿಕೋನದಿಂದ ವಿಮರ್ಶೆಗೆ ಒಳಪಡಿಸಿದ್ದೇ ಈ ಕೃತಿ.  

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books